
ವಿನೋದ್ ಪ್ರಭಾಕರ್ ಅವರಿಗೆ ಇತ್ತೀಚೆಗೆ ಅನಾರೋಗ್ಯ ಕಾಡಿತ್ತು. ಬಿಪಿ ಏರಿಳಿತದಿಂದ ಈ ರೀತಿ ಆಗಿತ್ತು. ಅವರ ನಟನೆಯ ‘ಬಲರಾಮನ ದಿನಗಳು’ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಈ ರೀತಿ ಆಗಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ಇದು ಸಿನಿಮಾ ಪ್ರಚಾರದ ಗಿಮಿಕ್’ ಎಂದು ಕೆಲವರು ಹೇಳಿದ್ದರು. ಈ ಬಗ್ಗೆ ನಿರ್ದೇಶಕ ‘ಬಲರಾಮನ ದಿನಗಳು’ ಚಿತ್ರದ ನಿರ್ದೇಶಕ ಕೆಎಂ ಚೈತನ್ಯ ಮಾತನಾಡಿದ್ದಾರೆ. ‘ವಿನೋದ್ ಗಟ್ಟಿ ಮುಟ್ಟಾಗಿದ್ದಾರೆ. ಅವರಿಗೆ ಅನಾರೋಗ್ಯ ಆದರೆ, ಚಿತ್ರಕ್ಕೆ ಹೇಗೆ ಸಹಕಾರಿ ಆಗುತ್ತದೆ ನೀವೇ ಹೇಳಿ? ನಾವು ಆ ರೀತಿ ಗಿಮಿಕ್ ಮಾಡಿಲ್ಲ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.