ತುಮಕೂರು, ಮೇ 14: ಇಂದಿರಾ ಗಾಂಧಿ ಬಿಟ್ಟರೆ ಮಾಸ್ ಲೀಡರ್ ನರೇಂದ್ರ ಮೋದಿಯೇ ಎಂದು ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಕೆ.ಎನ್. ರಾಜಣ್ಣ ಹೇಳಿದ್ದಾರೆ. ನಾನು ಹೀಗೆ ಹೇಳಿರೋದನ್ನು ಕೇಳಿದರೆ ನಮ್ಮಲ್ಲಿ ಕೆಲವರ ಕಣ್ಣು ಕೆಂಪಾಗುತ್ತೆ. ನಾನೇನು ಅವರನ್ನು ಹೊಗಳುತ್ತಿಲ್ಲ ಇರುವ ವಾಸ್ತವಾಂಶವನ್ನು ಹೇಳುತ್ತಿದ್ದೇನೆ ಎಂದವರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಿತ್ತಾಟ ಬಗ್ಗೆ ಮೋದಿ ಹೇಳಿಕೆ ಸಂಬಂಧ ಕಿಡಿ ಕಾರಿರುವ ರಾಜಣ್ಣ, ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಅಥವಾ ಇಲ್ಲವೋ ಅದು ನಮ್ಮ ಪಕ್ಷದ ವಿಚಾರ. ಸಿಎಂ ಸ್ಥಾನಕ್ಕೂ ಪ್ರಧಾನಿ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
