ಇಂದು 2026ರ ಆಗಸ್ಟ್ 10ರ ಸೋಮವಾರ, ಪರಾಭವ ನಾಮ ಸಂವತ್ಸರ, ಆಷಾಢ ಮಾಸದ ಕೃಷ್ಣ ಪಕ್ಷದ ದ್ವಾದಶಿ, ಆರ್ದ್ರಾ ನಕ್ಷತ್ರ ಇದ್ದು ರಾಹುಕಾಲವು ಬೆಳಗ್ಗೆ 7:40 ರಿಂದ 9:15 ರವರೆಗೆ ಇರಲಿದೆ. ಶುಭಕಾಲವು 9:15 ರಿಂದ 10:50 ರವರೆಗೆ ಇದೆ. ಈ ದಿನವು ಸೋಮ ಪ್ರದೋಷ ಮತ್ತು ಪಾಪನಾಶಿನಿ ದ್ವಾದಶಿ ಎಂದು ಗುರುತಿಸಲ್ಪಟ್ಟಿದೆ. ಸಂಧ್ಯಾಕಾಲದಲ್ಲಿ ಶಿವನ ನಾಮ ಜಪ, ದರ್ಶನ ಮತ್ತು ಅಭಿಷೇಕವನ್ನು ಮಾಡುವುದರಿಂದ ಅನೇಕ ಸಂಕಟಗಳಿಂದ ಮುಕ್ತಿ ಪಡೆಯಬಹುದಾಗಿದೆ. ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಮಿಥುನ ರಾಶಿಯ ಆರ್ದ್ರಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಇಂದಿನ ದ್ವಾದಶ ರಾಶಿಗಳ ಫಲಾಫಲವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
