ಇಂದು 2026ರ ಆಗಸ್ಟ್ 11, ಪರಾಭವ ನಾಮ ಸಂವತ್ಸರ, ಆಷಾಢ ಮಾಸ, ಕೃಷ್ಣ ಪಕ್ಷ ಚತುರ್ದಶಿ ಹಾಗೂ ಪುನರ್ವಸು ನಕ್ಷತ್ರ ಇದೆ. ಮಂಗಳವಾರದಂದು ಸುಬ್ರಮಣ್ಯ ಸ್ವಾಮಿ ಮತ್ತು ಹನುಮನ ಕೃಪೆಗೆ ಪಾತ್ರರಾಗಲು ಅವಕಾಶವಿದೆ. ಇಂದು ಮಾಸ ಶಿವರಾತ್ರಿ ಹಾಗೂ ಚಡಚಣ ಸಂಗಮೇಶ್ವರ ಉತ್ಸವವೂ ಜರುಗಲಿದೆ. ರವಿ ಮತ್ತು ಚಂದ್ರ ಕರ್ಕಾಟಕ ರಾಶಿಯಲ್ಲಿ ಪುನರ್ವಸು ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಗುರು ಸಹ ಅಲ್ಲಿಯೇ ಇರುವುದರಿಂದ ಇದು ಗಜಕೇಸರಿ ಮಹಾಯೋಗವನ್ನು ಸೃಷ್ಟಿಸಿದೆ. ರಾಹುಕಾಲ ಮಧ್ಯಾಹ್ನ 3 ಗಂಟೆ 23 ನಿಮಿಷದಿಂದ 5 ಗಂಟೆ 4 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭ ಕಾಲವು ಬೆಳಗ್ಗೆ 10 ಗಂಟೆ 50 ನಿಮಿಷದಿಂದ ಮಧ್ಯಾಹ್ನ 12 ಗಂಟೆ 24 ನಿಮಿಷದ ತನಕ ಇದೆ. ಇಂದಿನ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
