2026ರ ಜುಲೈ 10ರ, ಶುಕ್ರವಾರದ ದೈನಂದಿನ ರಾಶಿಫಲಗಳನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್’ ದಿನ ಭವಿಷ್ಯ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಪರಾಭವ ನಾಮ ಸಂವತ್ಸರ, ಉತ್ತರಾಯಣ, ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿ ಇಂದಿನ ಪ್ರಮುಖ ಅಂಶಗಳು. ಇದು ಯೋಗಿನಿ ಏಕಾದಶಿಯ ಪವಿತ್ರ ದಿನವಾಗಿದ್ದು, ಏಕಾದಶಿ ಉಪವಾಸವು ಹತ್ತು ಹಬ್ಬಗಳಿಗೆ ಸಮಾನ ಎಂದು ತಿಳಿಸಿದ್ದಾರೆ. ಇಂದು ಬುದ್ಧಿ ಕಾರಕ ಬುಧ ಗ್ರಹದ ಜಯಂತಿಯ ದಿನವೂ ಹೌದು. ಲಕ್ಷ್ಮಿ ದೇವಿಯ ಆರಾಧನೆಗೆ ಈ ಶುಕ್ರವಾರ ಅತ್ಯಂತ ಪವಿತ್ರ ದಿನವಾಗಿದೆ ಎಂದು ಗುರೂಜಿ ಹೇಳಿದ್ದಾರೆ. ಹಣಕಾಸಿನ ತೊಂದರೆ ಇರುವವರಿಗೆ ಇಂದು ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಸುವರ್ಣಾವಕಾಶ ಎಂದು ಅವರು ತಿಳಿಸಿದ್ದಾರೆ.
ರಾಹುಕಾಲವು ಬೆಳಗ್ಗೆ 10:47 ರಿಂದ ಮಧ್ಯಾಹ್ನ 12:23 ರವರೆಗೆ ಇರುತ್ತದೆ. ಸಂಕಲ್ಪ ಕಾಲವು 12:24 ರಿಂದ 2:01 ರವರೆಗೆ ಇರಲಿದೆ. ಸೂರ್ಯ ಮಿಥುನ ರಾಶಿಯಲ್ಲಿದ್ದರೆ, ಚಂದ್ರ ಮೇಷ ರಾಶಿಯಲ್ಲಿ ಸಂಚರಿಸಲಿದ್ದಾನೆ.
