ಬೆಂಗಳೂರು, ಏ.21: ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈಕಲ್ ಮತ್ತು ದ್ವಿಚಕ್ರ ವಾಹನಗಳಿಗೆ ಟೋಲ್ ಮುಕ್ತ ಸಂಚಾರಕ್ಕೆ ಅವಕಾಶವಿರುವುದು ಸಾಮಾನ್ಯ. ಆದರೆ, ಬೆಂಗಳೂರಿನ ಈ ನಿರ್ದಿಷ್ಟ ಕಾರಿಡಾರ್ನಲ್ಲಿ ಸೈಕಲ್ ಸವಾರನೊಬ್ಬನಿಂದ 25 ರೂ. ಟೋಲ್ ವಸೂಲಿ ಮಾಡಿರುವ ವಿಡಿಯೋ ಈಗ “ತೆರಿಗೆ ಅಥವಾ ಸುಲಿಗೆ?” ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸೈಕಲ್ ಸವಾರ ಟೋಲ್ ಬೂತ್ನಲ್ಲಿ ನಿಂತು ನಗದು ಹಣ ನೀಡುತ್ತಿರುವುದು ಮತ್ತು ಸಿಬ್ಬಂದಿ ಅದನ್ನು ಸ್ವೀಕರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರಿ ಸ್ವಾಮ್ಯದ ರಸ್ತೆಗಳಲ್ಲಿ ಸೈಕಲ್ಗಳಿಗೆ ಶುಲ್ಕವಿಲ್ಲದಿದ್ದರೂ, ಈ ಖಾಸಗಿ ಮೂಲಸೌಕರ್ಯದ ಹಾದಿಯಲ್ಲಿ ಸಾಮಾನ್ಯ ಜನರಿಗೂ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂಬುದು ಸಾರ್ವಜನಿಕರ ದೂರು.ನಿತ್ಯ ಕೆಲಸಕ್ಕೆ ಹೋಗುವ ಕಾರ್ಮಿಕರು ಅಥವಾ ಸಾಮಾನ್ಯ ನಾಗರಿಕರು ಇಂಧನ ಉಳಿತಾಯ ಮತ್ತು ಪರಿಸರ ಕಾಳಜಿಯಿಂದ ಸೈಕಲ್ ಬಳಸುತ್ತಾರೆ. ಅವರಿಂದಲೂ ಶುಲ್ಕ ಪಡೆಯುವುದು ಎಷ್ಟು ಸರಿ? ಎಂಬ ಪ್ರಶ್ನೆ ಎದ್ದಿದೆ. ಭಾರತದ ಬಹುತೇಕ ಹೆದ್ದಾರಿಗಳಲ್ಲಿ ಸಣ್ಣ ವಾಹನಗಳಿಗೆ ರಿಯಾಯಿತಿ ಇದೆ. ಆದರೆ ಖಾಸಗಿ ಕಂಪನಿಗಳ ನಿರ್ವಹಣೆಯಲ್ಲಿರುವ ಇಂತಹ ರಸ್ತೆಗಳಲ್ಲಿನ ನಿಯಮಗಳು ಬಡವರ ಜೇಬಿಗೆ ಕತ್ತರಿ ಹಾಕುತ್ತಿವೆ. ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸೈಕಲ್ ಬಳಕೆಯನ್ನು ಉತ್ತೇಜಿಸಬೇಕಿದೆ. ಆದರೆ ಇಂತಹ ಶುಲ್ಕಗಳು ಸವಾರರ ಉತ್ಸಾಹ ಕುಗ್ಗಿಸುತ್ತಿವೆ.
ವಿಡಿಯೋ ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
