ಉತ್ತಮ ಆರೋಗ್ಯಕ್ಕೆ ವಿಷ್ಣುವರ್ಧನ್ ನೀಡಿದ್ದರು ಟಿಪ್ಸ್

ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಇದ್ದರು. ಅವರು ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಅವರು ಅನೇಕ ಬಾರಿ ಆರೋಗ್ಯ ಕಾಪಾಡಿಕೊಳ್ಳಲು ಟಿಪ್ಸ್ ನೀಡುತ್ತಿದ್ದರು. ಈಗ ಅವರ ಒಂದು ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದರಲ್ಲಿ ಅವರು ಆರೋಗ್ಯದ ಬಗ್ಗೆ ಟಿಪ್ಸ್ ನೀಡಿದ್ದರು ಅನ್ನೋದು ವಿಶೇಷ. ಆ ಸಂದರ್ಭದ ವಿವರ ಇಲ್ಲಿದೆ.

‘ಆರೋಗ್ಯಕ್ಕೆ ಹಿಂದಿನದವರು ಪ್ರಾಮುಖ್ಯತೆ ಕೊಡುತ್ತಿದ್ದರು. ಹೊರಗೆ ಚೆನ್ನಾಗಿ ಇಟ್ಟುಕೊಂಡಷ್ಟೇ ಒಳಗೂ ಚೆನ್ನಾಗಿಟ್ಟುಕೊಳ್ಳಬೇಕು. ಅಜ್ಞಾನದಿಂದ ದುಃಖ, ದುಃಖದಿಂದ ರೋಗ, ರೋಗದಿಂದ ಭಯ. ಭಯ ಬಂದಾಗ ಇಡೀ ದೇಹ ವಿಷ ಆಗುತ್ತದೆ’ ಎಂದು ವಿಷ್ಣುವರ್ಧನ್ ಹೇಳಿದ್ದರು.

‘ನಿಸರ್ಗವನ್ನು ನಾವು ನಾಶ ಮಾಡಿದ್ದೇವೆ. ನಾವು ನಮ್ಮ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಿದೆ. ನಾವು ತಿನ್ನುವ ಆಹಾರ, ಆಡುವ ಮಾತು ಎಲ್ಲವೂ ಚೆನ್ನಾಗಿರಬೇಕು. ಆಯುರ್ವೇದವನ್ನು ವಿದೇಶದವರು ಫಾಲೋ ಮಾಡುತ್ತಿದ್ದಾರೆ. ಧ್ಯಾನ, ಪ್ರಾಣಾಯಾಮ ಎಲ್ಲವೂ ಮನಸ್ಸಿಗೆ ವ್ಯಾಯಾಮ ನೀಡುತ್ತದೆ’ ಎಂದು ಅವರು ಹೇಳಿದ್ದರು.

‘ಒಳ್ಳೆಯವರ ಸಹವಾಸ ಮಾಡಬೇಕು. ಎಲ್ಲರೂ ಒತ್ತಡದಲ್ಲೇ ಇರುತ್ತಾರೆ. ಅವರು ಓಡುತ್ತಿದ್ದಾರೆ ಎಂದು ನಾವು ಓಡುತ್ತಿದ್ದೇವೆ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆದರೆ, ಅದು ಯಾರಿಗೂ ಇಲ್ಲ. ಎಲ್ಲರೂ ನಿತ್ಯ ಮಂತ್ರ-ಶ್ಲೋಕ ಹೇಳಬೇಕು. ಆಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವಿಜ್ಞಾನ-ಜ್ಞಾನ ಎಲ್ಲವೂ ಇಲ್ಲಿಂದಲೇ ಹೋಗಿದ್ದು’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: 10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ

‘ದೇಹದ ಬಗ್ಗೆ ಜ್ಞಾನ ಬೇಕು. ನಡೆ-ನುಡಿ ಎಲ್ಲವೂ ಚೆನ್ನಾಗಿರಬೇಕು. ಪ್ರಾಣಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಮನುಷ್ಯರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ರಾಜಸ್ಥಾನದ ಆಹಾರ ಇಲ್ಲಿ ಸೆಟ್ ಆಗಲ್ಲ. ಆದರೆ, ಆಹಾರ ಕ್ರಮದಲ್ಲಿ ಬದಲಾಗಿದೆ’ ಎಂದು ವಿಷ್ಣುವರ್ಶನ್ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

 

 

Source link

Leave a Reply

Your email address will not be published. Required fields are marked *