ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ; ಸ್ವಾಮಿ ವಿವೇಕಾನಂದರು ಕೆನಡಾದಲ್ಲಿ ಕಳೆದ ದಿನಗಳ ಉಲ್ಲೇಖಿಸಿದ ಪ್ರಧಾನಿ ಕಾರ್ನಿ – Kannada News | Arise, Awake And Stop Not; Canada PM Mark Carney quotes Swami Vivekananda in joint address with PM Modi

ನವದೆಹಲಿ, ಮಾರ್ಚ್ 2: ಭಾರತ ಪ್ರವಾಸದಲ್ಲಿರುವ ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನಿ (Mark Carney) ಇಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (PM Modi) ಜಂಟಿ ಭಾಷಣ ಮಾಡಿದ್ದಾರೆ. ಈ ವೇಳೆ ಅವರು 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನಕ್ಕಾಗಿ ಅಮೆರಿಕಕ್ಕೆ ಹೋಗುವಾಗ ಸ್ವಾಮಿ ವಿವೇಕಾನಂದರು ಕೆನಡಾಕ್ಕೆ ಭೇಟಿ ನೀಡಿದ ಬಗ್ಗೆಯೂ ಮಾತನಾಡಿದ್ದಾರೆ.

ಭಾರತ ಮತ್ತು ಕೆನಡಾ ನಡುವಿನ ಪಾಲುದಾರಿಕೆಯನ್ನು ವಿವರಿಸಲು ಪ್ರಧಾನಿ ಕಾರ್ನಿ ವಿವೇಕಾನಂದರ ಜನಪ್ರಿಯ ಹೇಳಿಕೆಯನ್ನು ಉಲ್ಲೇಖಿಸಿದರು. “ಏಳಿ, ಎದ್ದೇಳಿ, ಗುರಿ ತಲುಪುವವರೆಗೆ ನಿಲ್ಲಬೇಡಿ” ಎಂದು ವಿವೇಕಾನಂದರು ಹೇಳುತ್ತಿದ್ದರು. ಅವರು ಕೆನಡಾದಲ್ಲಿ ಸ್ವಲ್ಪ ಸಮಯ ಕಳೆದರು. ವಿವೇಕಾನಂದರು ಹೇಳಿದಂತೆಯೇ ಭಾರತದ ಜೊತೆಗಿನ ಈ ಪಾಲುದಾರಿಕೆಯಲ್ಲಿ ಗುರಿ ಮುಟ್ಟುವವರೆಗೂ ನಾವು ನಿಲ್ಲುವುದಿಲ್ಲ” ಎಂದು ಪ್ರಧಾನಿ ಕಾರ್ನಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *