ರಾಮನಗರ, (ಜುಲೈ 03): ಎಲ್ಲರೂ ಧರ್ಮದಲ್ಲಿ ಇರಬೇಕು. ರಾಜಕೀಯದಲ್ಲೂ ಧರ್ಮ ಇಟ್ಟುಕೊಂಡು ಕೆಲಸ ಮಾಡಬೇಕು. ಶಿವಾಲ ಮೂರ್ತಿ ಬೆಟ್ಟದಲ್ಲಿ ನನ್ನ ತಂದೆ-ತಾಯಿ ಹರೆಕೆ ಹೊತ್ತಿದ್ದರು. ಬಳಿಕ ನಾನು ಹುಟ್ಟಿದವನು. ಹೀಗಾಗಿ ನಾನು ನನ್ನ ಸೇವೆಯನ್ನು ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಕನಕಪುರದ ಶ್ರೀ ದೇಗುಲ ಮಠದ ಲಿಂಗೈಕ್ಯ ಪರಮಪೂಜ್ಯ ನಿ.ಪ್ರ.ಸ್ವ ಶ್ರೀ ಶ್ರೀ ಶ್ರೀ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಭಾಗವಹಿಸಿ, ತ್ರಿವಿಧ ದಾಸೋಹಿ ಮಹಾಸ್ವಾಮಿಗಳ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಎಂ, ನಾನು ಈ ಮಠಕ್ಕೆ ಭಕ್ತನಾಗಿ ಬಂದಿದ್ದೇನೆ. ನಮ್ಮ ಮನೆಯಲ್ಲಿ ಯಾರೇ ಹುಟ್ಟಿದರು ಕೆಂಪೇಗೌಡ ಎಂದು ಹೆಸರಿಡುವ ಪ್ರತೀತಿ. ನಮ್ಮ ತಾಯಿ ಶಿವನಲ್ಲಿ ಬೇಡಿಕೊಂಡಿದ್ದರು. ಅದಕ್ಕಾಗಿ ನನ್ನ ಹೆಸರು ಶಿವಕುಮಾರ್ ಆಗಿದೆ. ನಮ್ಮ ಮನೆಯಲ್ಲಿ ಎಲ್ಲರೂ ದೇಗುಲ ಮಠದ ಭಕ್ತರು. ನಾನು ಈಗಲೂ ಧರ್ಮ ಉಳಿಸಿಕೊಂಡು ಧರ್ಮದಿಂದ ನನ್ನ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
