‘ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ’; ಪ್ರಜ್ವಲ್​​ಗೆ ಗುರುದತ್ ತಿರುಗೇಟು

ಒಂದು ಸಿನಿಮಾ ಯಶಸ್ವಿಯಾಗಲು ನಿರ್ಮಾಪಕರಿಂದ ಹಿಡಿದು ತಂತ್ರಜ್ಞರು, ನಟರವರೆಗೆ ಎಲ್ಲರ ಸಾಮೂಹಿಕ ಶ್ರಮ ಮತ್ತು ಸಮರ್ಪಣಾ ಭಾವ ಅತ್ಯಗತ್ಯ ಎಂದು ಗುರುದತ್ ಗಾಣಿಗ ಒತ್ತಿ ಹೇಳಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಿರ್ಮಾಪಕರು ಚಿತ್ರರಂಗದ ಅನ್ನದಾತರು, ಅವರ ಶ್ರಮವನ್ನು ಯಾರೂ ಲಘುವಾಗಿ ಪರಿಗಣಿಸಬಾರದು ಎಂದು ಅಣ್ಣಾವ್ರ ಮಾತುಗಳನ್ನು ನೆನಪಿಸಿದ್ದಾರೆ. ಪ್ರಜ್ವಲ್ ಹೆಚ್ಚಿನ ಸಂಭಾವನೆ ಪಡೆದರೂ, ಡಬ್ಬಿಂಗ್‌ಗೆ ಬಾರದಿರುವ ಬಗ್ಗೆ ಬೇಸರ ಹೊರಹಾಕಿದರು.

‘ಕೆವಿಎನ್ ಸುಪ್ರೀತ್, ಜಾಕ್ ಮಂಜಣ್ಣ, ಲೋಹಿತ್ ಸೇರಿದಂತೆ ಅನೇಕರು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ, ಹಣ ಸಂದಾಯವಾಗುವವರೆಗೂ ಸಹಕರಿಸುವುದಿಲ್ಲ ಎಂಬ ನಿಲುವನ್ನು ಪ್ರಜ್ವಲ್ ತಾಳಿದ್ದರು. ಆಗಲೇ ನಾವು 85ರಷ್ಟು ಹಣವನ್ನು ಪಾವತಿಸಿದ್ದೆವು. ಪ್ರತಿಭೆ ಇರುವುದು ಎಷ್ಟು ಮುಖ್ಯವೋ, ಅಷ್ಟೇ ಡೆಡಿಕೇಶನ್ ಕೂಡ ಮುಖ್ಯ’ ಎಂದು ಗುರುದತ್ ಗಾಣಿಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದಲ್ಲಿ ಅನಗತ್ಯ ವಿವಾದಗಳು ಬರಬಾರದು ಎಂಬ ಕಾರಣಕ್ಕೆ ಅನೇಕ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿಲ್ಲ ಎಂದಿದ್ದಾರೆ. ‘ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ’ ಎಂದು ಗುರುದತ್ ಹೇಳಿದ್ದಾರೆ. ಸಂಪೂರ್ಣ ವಿವರ ವಿಡಿಯೋದಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

Leave a Reply

Your email address will not be published. Required fields are marked *