‘ಕನ್ನಡದಲ್ಲಿ ನಾಯಕ ನಟನ ಕೊರತೆಯನ್ನು ಕಡಿಮೆ ಮಾಡಿ’; ಗಿಲ್ಲಿಗೆ ಹಾರೈಸಿದ ಮುನಿರತ್ನ – Kannada News | Kannada Cinema Needs New Heroes: Gilli Actor Gets Munirathna’s Support

ಕನ್ನಡ ಚಿತ್ರರಂಗದಲ್ಲಿ ಹೀರೋಗಳ ಕೊರತೆ ಎದ್ದು ಕಾಣಿಸುತ್ತಿದೆ. ಕೆಲವರು ಪ್ಯಾನ್ ಇಂಡಿಯಾ ಸಿನಿಮಾ ಮಾಡುವತ್ತ ಗಮನ ಹರಿಸುತ್ತಿರುವುದರಿಂದ ಸಹಜವಾಗಿಯೇ ವಿಳಂಬ ಆಗುತ್ತಿದೆ. ಇನ್ನೂ ಕೆಲವರು ತಮ್ಮ ಪ್ರಾಮಾಣಿಕ ಶ್ರಮ ಹಾಕುತ್ತಿದ್ದಾರೆ. ಈ ಮಧ್ಯೆ ಯುವ ಹೀರೋಗಳು ಎಂಟ್ರಿ ಕೊಟ್ಟು, ಸ್ಟಾರ್​​​ಗಳಾಗಿ ಬೆಳೆಯಬೇಕು ಎಂಬುದು ಅನೇಕರ ಕೋರಿಕೆ. ಈಗ ಬೆಂಗಳೂರಿನ ಆರ್​​ಆರ್​​ ನಗರ ಶಾಸಕ ಮುನಿರತ್ನ ಅವರು ಗಿಲ್ಲಿಗೆ ಇದೇ ರೀತಿಯ ಹಾರೈಸಿದ್ದಾರೆ. ಗಿಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯಬೇಕು ಎಂದು ಬಯಸಿದ್ದಾರೆ.

ಗಿಲ್ಲಿ ನಟ ಅವರು ಓರ್ವ ಅದ್ಭುತ ಕಲಾವಿದ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಅವರ ಬಳಿ ಸಾಕಷ್ಟು ಟ್ಯಾಲೆಂಟ ಇದೆ. ಈ ಟ್ಯಾಲೆಂಟ್​​ನ್ ನೋಡಿ ಅವರಿಗೆ ಸಿನಿಮಾ ಅವಕಾಶ ಸಿಗಬೇಕು ಎಂಬುದು ಅನೇಕರ ಕೋರಿಕೆ ಆಗಿದೆ. ಮುನಿರತ್ನ ಕೂಡ ಇದೇ ರೀತಿಯಲ್ಲಿ ಹಾರೈಸಿದ್ದಾರೆ.

ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಾಗಿತ್ತು. ಇದರ ವೇದಿಕೆ ಏರಿದ ಗಿಲ್ಲಿ ನಟ ಅವರನ್ನು ಮುನಿರತ್ನ ಸ್ವಾಗತಿಸಿದರು. ‘ದರ್ಶನ್ ಮೊದಲ ಚಿತ್ರಕ್ಕೆ ನಾನೇ ಕ್ಲ್ಯಾಪ್ ಮಾಡಿದ್ದು. ನಾನು ಗುತ್ತಿಗೆದಾರ. ನನ್ನ ಸಹೋದ್ಯೋಗಿ ಗುತ್ತಿಗೆದಾರ ರಾಮಮೂರ್ತಿ ಕ್ಲ್ಯಾಪ್ ಮಾಡೋಕೆ ಕರೆದರು. ನಾನು ಕ್ಲ್ಯಾ

ಪ್ ಮಾಡಿ ಬಂದೆ. ನಂತರ ದರ್ಶನ್ ಜೊತೆಯೇ ಸಿನಿಮಾ ಮಾಡಿದೆ’ ಎಂದು ಮುನಿರತ್ನಹೇಳಿದ್ದಾರೆ.

‘ನೀವು ದೊಡ್ಡ ನಾಯಕನಟನಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ. ಕನ್ನಡ ಚಿತ್ರರಂಗದಲ್ಲಿ ನಾಯಕ ನಟನ ಕೊರತೆ ಇದೆ. ಆ ಕೊರತೆ ಕಮ್ಮಿ ಮಾಡುವತ್ತ ಅವರು ಶ್ರಮಿಸಲಿ ಎಂದು’ ಮುನಿರತ್ನ ಹೇಳಿದರು. ಈ ಹಾರೈಕೆಯನ್ನು ಕೇಳಿದ ಬಳಿಕ ಗಿಲ್ಲಿ ನಟನಿಗೆ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ.

ಇದನ್ನೂ ಓದಿ: ದರ್ಶನ್ ಭೇಟಿಗೆ ಪ್ರಯತ್ನಿಸಿದ್ರೂ ಅವಕಾಶ ಸಿಗಲಿಲ್ಲ: ಸತ್ಯ ತೆರೆದಿಟ್ಟ ಗಿಲ್ಲಿ ನಟ

ಗಿಲ್ಲಿ ನಟ ಅವರು ನಿರ್ದೇಶಕನಾಗಬೇಕು ಎಂದು ಕನಸು ಕಾಣುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಅವರು ವಿವಿಧ ಉತ್ಸವಗಳಿಗೆ ತೆರಳುತ್ತಿದ್ದಾರೆ. ಆ ಬಳಿಕ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *