ಕೊಡಗು, (ಜುಲೈ.8): ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕನ್ನಂಬಾಡಿ ಗ್ರಾಮದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಳಿಂದ ಕೆರೆ ಕೆಸರಿನಲ್ಲಿ ಸಿಲುಕಿ ಕಾಲ ನರಳಾಡಿದ್ದು, ಯಾರೂ ಸಹಾಯಕ್ಕೆ ಬಂದಿಲ್ಲ. ಕೊನೆಗೆ ಆನೆ ತಾನಾಗಿಯೇ ಕರೆಯಿಂದ ಹೊರಬಂದಿದೆ. ಹೌದು…ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದ ಕೆರೆಯ ಕೆಸರಿನಲ್ಲಿ ಕಾಡಾನೆ ಕಳೆದ ಎರಡು ದಿನಗಳಿಂದ ಸಿಲುಕಿ ಒದ್ದಾಡಿದ್ದು, ನೀರು, ಆಹಾರವಿಲ್ಲದೇ ಕೆಸರಿನಿಂದ ಆಚೆ ಬರಲು ಇನ್ನಿಲ್ಲದ ಕಸರತ್ತು ಮಾಡಿತ್ತು. ಅಂತಿಮವಾಗಿ ಎರಡನೇ ದಿನಕ್ಕೆ ಅಂದರೆ ಇಂದು (ಜುಲೈ 08) ತಾನಾಗಿಯೇ ಕರೆಯಿಂದ ಆಚೆ ಬಂದು ನಿಟ್ಟುಸಿರುಬಿಟ್ಟಿದೆ.
