ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಮತ್ತಷ್ಟು ಡಿವೈಎಸ್​ಪಿ-ಇನ್‌ಸ್ಪೆಕ್ಟರ್‌ಗಳ ದಿಢೀರ್‌ ವರ್ಗಾವಣೆ – Kannada News | Major surgery to Karnataka Police department: 12 DySP And 87 inspectors transferred

ಬೆಂಗಳೂರು, (ಮೇ 13): ಕರ್ನಾಟಕ ರಾಜ್ಯ ಪೊಲೀಸ್ (Karnataka Police) ಇಲಾಖೆಯಲ್ಲಿ ಡಿವೈಎಸ್ಪಿ ಹಾಗೂ ಇನ್ಸ್​​ಪೆಕ್ಟರ್​​​ಗಳ ವರ್ಗಾವಣೆ ಮುಂದುವರೆದಿದೆ . ಕಳೆದ ಎರಡು ದಿನಗಳಿಂದ ಅಷ್ಟೇ ರಾಜ್ಯ ಸರ್ಕಾರ ಬರೋಬ್ಬರಿ 293 ಇನ್ಸ್‌ಪೆಕ್ಟರ್‌ಗಳು ಹಾಗೂ 74 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು (ಮೇ 13) ಮತ್ತೆ 12 ಡಿವೈಎಸ್​ಪಿ, 87 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು (ಸಿವಿಲ್) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು (ಡಿಜಿ- ಐಜಿಪಿ) ಆದೇಶ ಹೊರಡಿಸಿದ್ದಾರೆ.

  • ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮುಂದುವರೆದ ಡಿವೈಎಸ್ಪಿ ಹಾಗೂ ಇನ್ಸ್​​ಪೆಕ್ಟರ್​​​ಗಳ ವರ್ಗಾವಣೆ.
  • 87 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 12 ಡಿವೈಎಸ್‌ಪಿ ವರ್ಗಾವಣೆ.
  • ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರಿಂದ ಆದೇಶ.
  • ಎರಡು ದಿನದಿಂದ ಅಷ್ಟೇ 293 ಇನ್ಸ್‌ಪೆಕ್ಟರ್ ಹಾಗೂ 74 ಡಿವೈಎಸ್‌ಪಿಗಳನ್ನ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮೂವರು ಹಿರಿಯ IPS, ನಾಲ್ವರು IAS ಅಧಿಕಾರಿಗಳ ವರ್ಗಾವಣೆ: ಯಾರು ಎಲ್ಲಿಗೆ? ಇಲ್ಲಿದೆ ವಿವರ

ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದ್ದು, ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ವರ್ಗಾವಣೆಗೊಂಡ ಡಿವೈಎಸ್‌ಪಿಗಳ ಪಟ್ಟಿ

  • ಉಮಾಶಂಕರ್ ಬಿ: ಬಿ.ಎಂ.ಟಿ.ಎಫ್, ಬೆಂಗಳೂರು.
  • ಪ್ರಭಾವತಿ ಪಾಂಡುರಂಗ: ಸಿಐಡಿಯಿಂದ ಮಲ್ಲೇಶ್ವರಂ ಉಪ ವಿಭಾಗ, ಬೆಂಗಳೂರು ನಗರ.
  • ದೀಪಕ್ ಸಿ.ವಿ: ಸಿಸಿಬಿಯಿಂದ ಚಿಕ್ಕಪೇಟೆ ಉಪ ವಿಭಾಗಕ್ಕೆ ವರ್ಗ.
  • ರಮೇಶ್ ಜಿ.ಆರ್-ಡಿಸಿಆರ್​​ಇಗೆ ವರ್ಗಾವಣೆ
  • ಗೀತಾ ಸಿ.ಆರ್: ರಾಜ್ಯ ಗುಪ್ತವಾರ್ತೆಯಿಂದ ರಾಮನಗರದ ಸಿ.ಸಿ.ಪಿ.ಎಸ್
  • ಮೇರಿ ಶೈಲಜಾ: ಎ.ಎನ್.ಟಿ.ಎಫ್ ಯಿಂದ ಸಿಐಡಿಗೆ ವರ್ಗ
  • ಶಿವಶಂಕರ ರೆಡ್ಡಿ ಬಿ: ರಾಜ್ಯ ಗುಪ್ತವಾರ್ತೆಯಿಂದ ಸಿ.ಸಿ.ಪಿ.ಎಸ್, ಆಗ್ನೇಯ ವಿಭಾಗ, ಬೆಂಗಳೂರು ನಗರ
  • ಪವನ್ ಎನ್: ಬೆಂಗಳೂರು ಸಿ.ಸಿ.ಪಿ.ಎಸ್, ಆಗ್ನೇಯ ವಿಭಾಗದಿಂದ ಸಿಐಡಿಗೆ ವರ್ಗಾವಣೆ
  • ವಜೀರ್ ಅಲಿ ಖಾನ್: ಹಿಂದಿನ ವರ್ಗಾವಣೆ ರದ್ದುಪಡಿಸಿ ಕೆ.ಎಸ್.ಹೆಚ್.ಆರ್.ಸಿಯಲ್ಲೇ ಮುಂದುವರಿಕೆ
  • ಸುಧೀರ್ ಎಂ ಹೆಗಡೆ: ವರ್ಗಾವಣೆ ರದ್ದುಪಡಿಸಿ, ಪ್ರಸ್ತುತ ಹುದ್ದೆಯಲ್ಲೇ (ಸಿ.ಐ.ಡಿ) ಮುಂದುವರಿಕೆ
  • ಅಂಜುಮಾಲಾ ಶಿವಣ್ಣ ನಾಯಕ್: ಸಿಐಡಿಯಿಂದ ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗಕ್ಕೆ ವರ್ಗ.
  • ಶಶಿಕಲಾ ಎಸ್.ಪಿ: ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗದಿಂದ ಸಿಐಡಿಗೆ ವರ್ಗಾವಣೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *