ಕೈಗೆ ಬಂದ ತುತ್ತು ಬಾಯಿಗಿಲ್ಲ! ಪ್ರವಾಸಿಗರಿಗೆ ಸ್ವರ್ಗ, ಸ್ಥಳೀಯರಿಗೆ ನರಕ: ಇದು ಉತ್ತರ ಕನ್ನಡದ ಕುಗ್ರಾಮದ ಕಥೆ – Kannada News | Heaven for Tourists, Hell for Locals: The Untold Story of Medini Village in Uttara Kannada

ರಸ್ತೆ ಇಲ್ಲದೆ ಗ್ರಾಮಸ್ಥರು ಪರದಾಟImage Credit source: tv9 kannada

ಉತ್ತರ ಕನ್ನಡ, ಮೇ 20: ಉತ್ತರ ಕನ್ನಡ (uttara kannada) ಜಿಲ್ಲೆಯ ನೈಸರ್ಗಿಕ ಸೌಂದರ್ಯಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅದೇ ಜಿಲ್ಲೆಯ ಘಟ್ಟದ ಮೇಲಿನ ಮೇದಿನಿ ಗ್ರಾಮದ ಜನ ಇಂದಿಗೂ ಮೂಲಭೂತ ಸೌಕರ್ಯಕ್ಕಾಗಿ ಹೋರಾಡುತ್ತಿದ್ದಾರೆ. ನಿತ್ಯಹರಿದ್ವರ್ಣ ಕಾಡಿನ ಮಧ್ಯದಲ್ಲಿರುವ ಈ ಗ್ರಾಮಕ್ಕೆ ಸೂಕ್ತ ರಸ್ತೆ (Road) ಇಲ್ಲದ ಕಾರಣ ದಶಕಗಳಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಇಲ್ಲದಕ್ಕೆ ಯುವಕರಿಗೆ ಕನ್ಯಾ ಕೂಡ ಕೊಡುತ್ತಿಲ್ಲ.

ಮುಖ್ಯಾಂಶಗಳು

  • ಮೂಲಭೂತ ಸೌಕರ್ಯಕ್ಕಾಗಿ ದಶಕಗಳಿಂದ ಹೋರಾಟ
  • ರಸ್ತೆ ಇಲ್ಲದಕ್ಕೆ ಯುವಕರಿಗಿಲ್ಲ ವಿವಾಹ ಭಾಗ್ಯ!
  • ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ನಿಯಮಗಳ ತೊಡಕು?

ಉತ್ತರ ಕನ್ನಡ ಜಿಲ್ಲೆ ಹತ್ತು ಹಲವು ವಿಶೇಷತೆಗಳ ತವರೂರು. ಚಿಕ್ಕ ಮಕ್ಕಳಿಂದ ವಯೋ ವೃದ್ಧರ ವರೆಗೆ ಪ್ರತಿಯೊಬ್ಬರೂ ಎಂಜಾಯ್ ಮಾಡಬಹುದಾದ ಸ್ಥಳ ಮತ್ತ ವಾತಾವರಣ ಈ ಜಿಲ್ಲೆ ಹೊಂದಿದೆ. ಹೀಗಾಗಿ ಕೇವಲ ಕರ್ನಾಟಕ ಅಷ್ಟೆ ಅಲ್ಲ ದೇಶ ವಿದೇಶಗಳಿಂದಲೂ ಜನ ಬಂದು ಇಲ್ಲಿ ಕಾಲ ಕಳೆಯುತ್ತಾರೆ. ಆದರೆ ನಿತ್ಯಹರಿದ್ವರ್ಣದ ಕಾಡಿನಿಂದ ಆವೃತ್ತವಾಗಿರುವ ಘಟ್ಟದ ಮೇಲಿನ ಗ್ರಾಮ ಮೇದಿನಿ ಜನ ಪಡುವ ಕಷ್ಟ ನೋಡಿದರೆ ನಿಜಕ್ಕೂ ಪಾಪ ಅನಿಸುತ್ತೆ. ಇಲ್ಲಿನ ಜನ ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತ ಆಗುವುದಕ್ಕೆ ವ್ಯವಸ್ಥೆಯೇ ಕಾರಣವಾಗಿದೆ. ಈ ಗ್ರಾಮಕ್ಕೆ ಬರಲು ಸೂಕ್ತ ರಸ್ತೆ ಇಲ್ಲ. ದಶಕಗಳ ಹೋರಾಟದ ಫಲವಾಗಿ ರಸ್ತೆ ಮಂಜೂರುಗೊಂಡಿದ್ದರೂ ಅರಣ್ಯ ಇಲಾಖೆಯ ನೀತಿನಿಯಮಗಳಿಂದ ರಸ್ತೆ ಕಾಮಗಾರಿಗೆ ಅವಕಾಶ ಸಿಗುತ್ತಿಲ್ಲ.

ಇದನ್ನೂ ಓದಿ: ಕಾರವಾರ: ರಸ್ತೆ ಇಲ್ಲವೆಂದು ಈ ಗ್ರಾಮದ ಯುವಕರಿಗೆ ಕನ್ಯೆ ಕೊಡ್ತಿಲ್ಲ

ಮೇದಿನಿ ಗ್ರಾಮಸ್ಥರ ಸಮಸ್ಯೆ ಹೊಸದಲ್ಲ. ರಸ್ತೆ ಇಲ್ಲದ ಕಾರಣ ಕಳೆದ 10 ವರ್ಷಗಳಿಂದ ಇಲ್ಲಿನ ಯುವಕರಿಗೆ ಮದುವೆಗೆ ಕನ್ಯೆ ಸಿಗುತ್ತಿಲ್ಲ ಎಂಬ ವರದಿಯನ್ನು ಟಿವಿ9 ಈ ಹಿಂದೆಯೇ ಪ್ರಸಾರ ಮಾಡಿತ್ತು. ಈ ಬಗ್ಗೆ ಸುದ್ದಿ ಪ್ರಸಾರವಾದ ನಂತರ ಶಾಸಕ ದಿನಕರ ಶೆಟ್ಟಿ ರಸ್ತೆ ಮಂಜೂರಾತಿಗೆ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರಸ್ತೆ ಕಾಮಗಾರಿಗೆ ಹಣವನ್ನು ಮಂಜೂರು ಮಾಡಿದ್ದಾರೆ. ಆದರೆ ನಿತ್ಯ ಹರಿದ್ವರ್ಣದ ಕಾಡಿನ ನಡುವೆ ರಸ್ತೆ ನಿರ್ಮಾಣವಾಗಿರುವುದರಿಂದ ಅರಣ್ಯ ಇಲಾಖೆಯ ಅನುಮತಿಯ ಕೊರತೆಯಿಂದ ‘ಕೈಗೆ ಬಂದ ತುತ್ತು ಬಾಯಿಗೆ ಬಾರದ’ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ರಸ್ತೆ ಇಲ್ಲದ ಈ ಕುಗ್ರಾಮದ ಯುವಕರಿಗೆ ಯಾರೂ ಹುಡುಗಿ ಕೊಡುತ್ತಿಲ್ಲ! ಪಕ್ಕದೂರಲ್ಲೇ ಸಂಪುಟ ಸಭೆ ನಡೆದರೂ ಇವರ ಸಮಸ್ಯೆಗಿಲ್ಲ ಮುಕ್ತಿ

ಒಟ್ಟಾರೆಯಾಗಿ ಅರಣ್ಯ ಇಲಾಖೆಯ ನಿಯಮಗಳ ತೊಡಕಿನಿಂದ ಮೇದಿನಿ ಗ್ರಾಮಸ್ಥರ ಕಷ್ಟಕ್ಕೆ ಅಂತ್ಯವಿಲ್ಲದಂತಾಗಿದೆ. ಅರಣ್ಯ ಇಲಾಖೆ ಆದಷ್ಟು ಬೇಗ ಪರವಾನಗಿ ನೀಡಿದರೆ ಮಾತ್ರ ಈ ಗ್ರಾಮದ ಜನರ ದಶಕಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *