ಕೊಪ್ಪಳದಲ್ಲಿ ಮಳೆಗಾಗಿ ವಿಭಿನ್ನ ಹರಕೆ: ಊಡಚಮ್ಮ ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ – Kannada News | Koppal Prays for Rain: Devotees Hold Overnight Bhajans at Uduchamma Devi Temple

ಕೊಪ್ಪಳ, ಜುಲೈ 03: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಆತಂಕದ ನಡುವೆ, ತಳಬಾಳು ಗ್ರಾಮದ ಜನತೆ ಮಳೆಗಾಗಿ ವಿಭಿನ್ನ ಹರಕೆಯನ್ನು ಪೂರೈಸಿದ್ದಾರೆ. ಬರಗಾಲದ ಪರಿಸ್ಥಿತಿಯನ್ನು ನಿವಾರಿಸಲು, ಗ್ರಾಮಸ್ಥರು ತಳಬಾಳು ಗ್ರಾಮದಿಂದ ಅರಕೇರಾ ಗ್ರಾಮದಲ್ಲಿರುವ ಊಡಚಮ್ಮ ದೇವಿ ದೇಗುಲದವರೆಗೆ ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆ ಮುಗಿದ ನಂತರ, ರಾತ್ರಿಪೂರ್ತಿ ಊಡಚಮ್ಮ ದೇವಿ ದೇಗುಲದ ಮುಂದೆ ಭಜನೆ ಮಾಡುವ ಮೂಲಕ ದೇವರ ಮೊರೆ ಇಟ್ಟಿದ್ದಾರೆ. ಈ ವಿಶಿಷ್ಟ ಪ್ರಾರ್ಥನೆಯು ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಹಿರಿಯರಿಂದ ಬಂದ ಈ ವಾಡಿಕೆಯ ಪ್ರಕಾರ, ಊಡಚಮ್ಮ ದೇವಿ ದರ್ಶನಕ್ಕೆ ಬಂದು ಇಡೀ ರಾತ್ರಿ ಭಜನೆ ಮಾಡಿದರೆ ಮಳೆ ಬರುತ್ತದೆ ಎಂಬ ಅಚಲ ನಂಬಿಕೆ ಗ್ರಾಮಸ್ಥರಲ್ಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *