ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?

ತಮಿಳುನಾಡು ಸಿಎಂ ವಿಜಯ್ (Vijay) ಅವರು ಇಂದು (ಜೂನ್ 12) ಕರ್ನಾಟಕದ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿದ್ದರು. ಸಿಎಂ ಆದ ಬಳಿಕ ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುತ್ತಿರುವ ಮೂರನೇ ತಮಿಳುನಾಡು ಸಿಎಂ ಆಗಿದ್ದಾರೆ ವಿಜಯ್. ದಳಪತಿ ವಿಜಯ್ ಬರುತ್ತಿದ್ದ ಕಾರಣಕ್ಕೆ ಒಂದು ಗಂಟೆ ಕಾಲ ಇತರೆ ಭಕ್ತಾದಿಗಳಿಗೆ ದೇವಾಲಯದ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ವಿಜಯ್ ಅವರು ದೇವಾಲಯಕ್ಕೆ ಬಂದು ಮಾಡಿಸಿದ ಪೂಜೆಯ ಬಗ್ಗೆ ದೇವಾಲಯದ ಅರ್ಚಕರಾದ ನಿತ್ಯಾನಂದ ಅಡಿಗ ಅವರು ಟಿವಿ9 ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅರ್ಚಕರು ಹೇಳಿರುವಂತೆ ವಿಜಯ್ ಅವರಿಗಾಗಿ ವಿಶೇಷ ಪೂಜೆಗಳನ್ನೇನೂ ಮಾಡಿಲ್ಲವಂತೆ ಬದಲಿಗೆ ಸಾಮಾನ್ಯ ಪೂಜೆಯನ್ನೇ ಮಾಡಲಾಗಿದೆಯಂತೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *