ಖಂಡಿತ ಪಕ್ಷದ ಕೆಲವರನ್ನ ಭೇಟಿ ಮಾಡಿ ಚರ್ಚಿಸಿದ್ದೇನೆ: ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಡಿಕೆಶಿ ಹೇಳಿಕೆ – Kannada News | DK Shivakumar Reacts after Mets Congress high command In Delhi about Karnataka Politics

ನವದೆಹಲಿ, (ಏಪ್ರಿಲ್ 23): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ನಡೆಯುತ್ತಿರುವ ಕೆಲ ರಾಜಕೀಯ ವಿದ್ಯಮಾನಗಳ ಮಧ್ಯೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್  (DK Shivakumar) ದೆಹಲಿಗೆ ತೆರಳಿದ್ದು, ಅಲ್ಲಿ ಗೌಪ್ಯವಾಗಿ ವರಿಷ್ಠರನ್ನ ಭೇಟಿಯಾಗಿ ಮಹತ್ವದ ಚರ್ಚೆ ಮಾಡಿದ್ದಾರೆ. ಬಳಿಕ ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ದೆಹಲಿಗೆ ನಾನೇನು ಗಾಳಿ ಕುಡಿಯುವುದಕ್ಕೆ ಬಂದಿಲ್ಲ. ಖಂಡಿತ ಪಕ್ಷದ ಕೆಲವರನ್ನ ಭೇಟಿ ಮಾಡಿ ಚರ್ಚಿಸಿದ್ದೇನೆ. ಯಾರನ್ನ ಭೇಟಿಯಾಗಿದ್ದೇನೆ ಎಂದು ಹಾಗೆ ಹೇಳಬಾರದು. ವರಿಷ್ಠರನ್ನ ಭೇಟಿಯಾಗಿ ಚರ್ಚೆ ಮಾಡಿದ್ದು, ನನ್ನ ಕೆಲಸ ನಾನು ಮಾಡುತ್ತಿರುತ್ತೇನೆ. ಪಕ್ಷದ ವಿಚಾರವಾಗಿಯೂ ವರಿಷ್ಠರ ಬಳಿ ಚರ್ಚಿಸಿದ್ದೇನೆ. ನನ್ನಂಥವನು ಬಹಿರಂಗವಾಗಿ ಮಾತನಾಡಲು ಆಗುತ್ತಾ? ಎಂದು ಹೇಳಿದ್ದಾರೆ.

ಇದರೊಂದಿಗೆ ಡಿಕೆ ಶಿವಕುಮಾರ್ ಯಾರನ್ನ ಭೇಟಿ ಮಾಡಿದ್ದು? ಯಾಕಾಗಿ-ಯಾವ ವಿಚಾರವಾಗಿ ಭೇಟಿಯಾಗಿ ಏನೆಲ್ಲಾ ಚರ್ಚೆ ನಡೆಯಿತು ಎನ್ನುವ ಗುಟ್ಟು ಬಿಟ್ಟುಕೊಟ್ಟಿಲ್ಲ. ಬದಲಾಗಿ ಪಕ್ಷದ ವಿಚಾರವಾಗಿಯೂ ವರಿಷ್ಠರ ಬಳಿ ಚರ್ಚಿಸಿದ್ದೇನೆ . ಆದ್ರೆ, ಯಾರನ್ನ ಭೇಟಿಯಾಗಿದ್ದೇನೆಂದು ಹಾಗೆ ಹೇಳಬಾರದು ಎಂದು ಹೇಳಿಕೆ ನೀಡಿರುವುದು ಭಾರೀ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಮುಸ್ಲಿಂ ನಾಯಕ ನಡುವಿನ ಅಸಮಾಧಾನ, ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆ ಕೂಗಿನ ಮಧ್ಯೆ  ಡಿಕೆ ಶಿವಕುಮಾರ್  ರಹಸ್ಯವಾಗಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿದ್ದು, ನಾನಾ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *