ಚಿಕ್ಕಮಗಳೂರು, ಫೆಬ್ರವರಿ 11: ಬೇಟೆಗೆ ಹೊಂಚು ಹಾಕಿದ್ದ ಚಿರತೆಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಹಂದಿ ಎಸ್ಕೇಪ್ ಆಗಿರುವ ಪ್ರಸಂಗ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಡು ಹಂದಿ ಬೇಟೆಗೆ ಎರಡು ಚಿರತೆಗಳು ಹೊಂಚುಹಾಕಿ ಕುಳಿತಿದ್ದವು. ಒಂದು ಚಿರತೆ ಮರವೇರಿದ್ದರೆ ಮತ್ತೊಂದು ಕೆಳಭಾಗದಿಂದಲೇ ಅಟ್ಯಾಕ್ಗೆ ರೆಡಿ ಆಗಿತ್ತು. ಆದರೆ ಚಿರತೆಗೇ ಗುದ್ದಿ ಕಾಡುಹಂದಿ ಎಸ್ಕೇಪ್ ಆಗಿದೆ. ಹಂದಿ ಮತ್ತು ಚಿರತೆ ಕಾದಾಟದ ದೃಶ್ಯವೀಗ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
