ಜೂನಿಯರ್​ ಎನ್​​ಟಿಆರ್ ಸಿಎಂ ಆಗೋದು ಯಾವಾಗ? ಅವರಿಂದ ಸಿಕ್ಕಿತು ಉತ್ತರ ಏನು? – Kannada News | Junior NTR Breaks Silence on Becoming Andhra Pradesh CM and Taking Over TDP Legacy in Old video

ಹಿಂದಿನ ಸಂದರ್ಶನವೊಂದರಲ್ಲಿ, ಜೂನಿಯರ್ ಎನ್‌ಟಿಆರ್ ತಮ್ಮ ವೈಯಕ್ತಿಕ ಸಂಬಂಧಗಳು ಮತ್ತು ರಾಜಕೀಯ ದೃಷ್ಟಿಕೋನಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು. ಈ ವೇಳೆ ನಟ ನಂದಮೂರಿ ಬಾಲಕೃಷ್ಣ ಅವರ ಮೇಲಿನ ಅಪಾರ ಪ್ರೀತಿ ಹಾಗೂ ತೆಲುಗು ದೇಶಂ ಪಕ್ಷದ (ಟಿಡಿಪಿ) ಬಗೆಗಿನ ತಮ್ಮ ಬದ್ಧತೆಯನ್ನು ಸ್ಪಷ್ಟಪಡಿಸಿದ್ದರು. ನಂದಮೂರಿ ಬಾಲಕೃಷ್ಣ ಅವರನ್ನು ತಾವು ತುಂಬಾ ಇಷ್ಟಪಡುವುದಾಗಿ ಜೂನಿಯರ್ ಎನ್‌ಟಿಆರ್ ಪದೇ ಪದೇ ಒತ್ತಿ ಹೇಳಿದ್ದರು. ‘ನನಗೆ ಬಾಲಾ ಬಾಬಾಯಿ (ಚಿಕ್ಕಪ್ಪ) ಅಂದರೆ ತುಂಬಾ ಇಷ್ಟ. ಅವರು ಅದ್ಭುತ ವ್ಯಕ್ತಿ ಹಾಗೂ ತುಂಬಾ ಒಳ್ಳೆಯ ಮನಸ್ಸಿನವರು’ ಎಂದು ಹೊಗಳಿದ್ದರು. ಬಾಲಕೃಷ್ಣ ಅವರ ಕೋಪದ ಸ್ವಭಾವದ ಬಗ್ಗೆ ಹೊರಗಿನವರು ಆಡುವ ಮಾತುಗಳನ್ನು ನಿರಾಕರಿಸಿದ್ದ ಅವರು, ಅವುಗಳನ್ನು ಉದ್ದೇಶಪೂರ್ವಕವಲ್ಲದ ಕೋಪದ ಪ್ರಕೋಪಗಳಷ್ಟೇ ಎಂದು ತಳ್ಳಿಹಾಕಿದ್ದರು. ನಂದಮೂರಿ ಕುಟುಂಬದಲ್ಲಿ ಬಾಲಕೃಷ್ಣ ಅವರು ತಮಗೆ ತುಂಬಾ ವಿಶೇಷ ವ್ಯಕ್ತಿ ಎಂದು ಎನ್‌ಟಿಆರ್ ಸ್ಪಷ್ಟಪಡಿಸಿದ್ದರು.

ಇದೇ ವೇಳೆ ತಮ್ಮ ರಾಜಕೀಯ ಭವಿಷ್ಯ ಹಾಗೂ ಅಜ್ಜನ ರಾಜಕೀಯ ಪರಂಪರೆಯನ್ನು ಯಾವಾಗ ವಹಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಜೂನಿಯರ್ ಎನ್‌ಟಿಆರ್ ನೇರವಾದ ಉತ್ತರ ನೀಡಿದ್ದರು. ತಾವು ಸದ್ಯ ತೆಲುಗು ದೇಶಂ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷದ ನಿಷ್ಠಾವಂತನಾಗಿ ಜೀವನ ನಡೆಸಲು ಬಯಸುವುದಾಗಿ ಹೇಳಿದ್ದರು. ‘ಭವಿಷ್ಯ ಏನೆಂದು ನಾವು ಈಗಲೇ ಊಹಿಸಲು ಸಾಧ್ಯವಿಲ್ಲ. ಸಮಯ ಬರುವ ಮುನ್ನ ಅದರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದಿದ್ದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಹುದ್ದೆಯ ಮೇಲೆ ತಮಗೆ ಸದ್ಯಕ್ಕೆ ಯಾವುದೇ ಆಸೆ ಅಥವಾ ಯೋಜನೆಗಳಿಲ್ಲ. ಒಂದು ವೇಳೆ ಭವಿಷ್ಯದಲ್ಲಿ ಅಂತಹ ಸಂದರ್ಭ ಎದುರಾದರೆ ಮಾತ್ರ ಅದನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದರು. ಸಿಎಂ ಆಗಲು ಕೇವಲ ಆಸೆ ಇದ್ದರೆ ಸಾಲದು, ಅದಕ್ಕೆ ತಕ್ಕ ಮುತ್ಸದ್ದಿತನ ಹಾಗೂ ಅನುಭವ ಇರಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದ್ದರು. ಎಲ್ಲದಕ್ಕೂ ವಿಧಿಯ ಆಟ ಮುಖ್ಯ ಎಂದು ನಂಬಿರುವ ಅವರು, ಹಣೆಬರಹದಲ್ಲಿದ್ದರೆ ಖಂಡಿತಾ ಆಗುತ್ತದೆ, ಇಲ್ಲದಿದ್ದರೆ ಎಷ್ಟೇ ಪ್ರಯತ್ನಿಸಿದರೂ ಸಿಗುವುದಿಲ್ಲ ಎಂದಿದ್ದರು.

ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಹಾಗೂ ತಮ್ಮ ಅಜ್ಜ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಸ್ಥಾಪಿಸಿದ ಪಕ್ಷದ ಮೇಲೆ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅಪಾರ ಗೌರವ ಹಾಗೂ ನಂಬಿಕೆ ಇದೆ ಎಂದು ಜೂನಿಯರ್ ಎನ್‌ಟಿಆರ್ ಹೇಳಿದ್ದರು.

ಇದನ್ನೂ ಓದಿ: ಜೂ ಎನ್​ಟಿಆರ್ ಸಿನಿಮಾ: ಬಿಡುಗಡೆ ತಡೆಯುವುದಾಗಿ ಎಚ್ಚರಿಸಿದ ರಾಜಕಾರಣಿ

‘ಟಿಡಿಪಿ ಪಕ್ಷದ ಹಳದಿ ಧ್ವಜವನ್ನು ನೋಡಿದಾಗ ನಮಗೆ ಏನೋ ಒಂದು ರೀತಿಯ ಹೆಮ್ಮೆ ಮೂಡುತ್ತದೆ. ನಮ್ಮ ಹೃದಯವೇ ಆ ಧ್ವಜಕ್ಕಾಗಿ ಮಿಡಿಯುತ್ತದೆ’ ಎಂದು ಹೇಳುವ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದರು. ತಮ್ಮ ಅಜ್ಜ ಎನ್‌ಟಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಚಂದ್ರಬಾಬು ನಾಯ್ಡು ಅವರು ಪಕ್ಷದ ಚುಕ್ಕಾಣಿ ಹಿಡಿದ ಘಟನೆಯ ಬಗ್ಗೆ ಕೇಳಿದಾಗ ಜೂನಿಯರ್ ಎನ್‌ಟಿಆರ್ ಬಹಳ ಜಾಣ್ಮೆಯಿಂದ ಪ್ರತಿಕ್ರಿಯಿಸಿದ್ದರು. ಒಬ್ಬ ಮೊಮ್ಮಗನಾಗಿ, ತಮ್ಮ ಅಜ್ಜ ಇಂದು ಜೀವಂತವಾಗಿದ್ದು ತಮ್ಮ ಯಶಸ್ಸನ್ನು ನೋಡಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಆಸೆ ಇರುವುದಾಗಿ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *