‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್ ಕೊಟ್ಟಿರುವ ಕೊಡುಗೆ ಏನು? – Kannada News | Yash and others praised Radhika Pandith for her scarifies for Toxic movie

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ನಿನ್ನೆ (ಆಗಸ್ಟ್ 8) ಬಿಡುಗಡೆ ಆಗಿದೆ. ಬೆಂಗಳೂರಿನ ಎಎಂಬಿ ಮಾಲ್​​​ನಲ್ಲಿ ನಿನ್ನೆ ಅದ್ಧೂರಿಯಾಗಿ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ‘ಟಾಕ್ಸಿಕ್’ ಸಿನಿಮಾ ಎಲ್ಲ ಪ್ರಮುಖ ತಾರೆಯರು, ತಂತ್ರಜ್ಞರು ಭಾಗಿ ಆಗಿದ್ದರು. ಪ್ರತಿಯೊಬ್ಬರೂ ಸಹ ಇತರೆ ಕಲಾವಿದರು, ತಂತ್ರಜ್ಞರು ಸಿನಿಮಾಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಪರಸ್ಪರ ಕೊಂಡಾಡಿದರು. ಇದರ ಜೊತೆಗೆ ನಟಿ ರಾಧಿಕಾ ಪಂಡಿತ್ ನೀಡಿರುವ ಕೊಡುಗೆಯನ್ನೂ ಸಹ ಹಲವರು ಮೆಚ್ಚಿಕೊಂಡರು. ‘ಟಾಕ್ಸಿಕ್’ ಸಿನಿಮಾಕ್ಕೆ ರಾಧಿಕಾ ಪಂಡಿತ್​​ ನೀಡಿರುವ ಕೊಡುಗೆಯೇನು?

ನಿರ್ಮಾಪಕ ಕೆವಿಎನ್ ವೆಂಕಟ್ ಅವರು ಮೊದಲು ರಾಧಿಕಾ ಪಂಡಿತ್ ಅವರಿಗೆ ಧನ್ಯವಾದ ಹೇಳಿದರು. ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿಯೇ ಅಂತೆ ವೆಂಕಟ್ ಅವರು ಮೊದಲ ಬಾರಿಗೆ ಯಶ್ ಅವರನ್ನು ಭೇಟಿ ಆಗಿದ್ದು. ಆ ನಂತರ ನಟಿ ನಯನತಾರಾ, ರುಕ್ಮಿಣಿ ವಸಂತ್, ನಿರ್ದೇಶಕಿ ಗೀತು ಮೋಹನ್​​ದಾಸ್ ಕೊನೆಗೆ ನಟ ಯಶ್ ಸಹ ರಾಧಿಕಾ ಪಂಡಿತ್ ಅವರಿಗೆ ವಿಶೇಷವಾದ ಧನ್ಯವಾದ ಹೇಳಿದರು. ಇದಕ್ಕೆ ಕಾರಣವೂ ಇದೆ.

‘ಟಾಕ್ಸಿಕ್’ ಸಿನಿಮಾದ ಪ್ರೀ ಪ್ರೊಡಕ್ಷನ್, ಚಿತ್ರೀಕರಣ ಎಲ್ಲವೂ ಸೇರಿ ಸುಮಾರು ನಾಲ್ಕೂವರೆ ವರ್ಷ ಹಿಡಿದೆ. ಇಷ್ಟೂ ಅವಧಿಯಲ್ಲಿ ಯಶ್, ಪ್ರತಿಯೊಂದು ವಿಭಾಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಾಲ್ಕೂವರೆ ವರ್ಷದಲ್ಲಿ ಯಶ್, ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ಸಮಯ ಕಳೆದಿರವುದು ಬಹು ಕಡಿಮೆಯಂತೆ. ಪತಿಯನ್ನು ಹೀಗೆ ಒಂದು ಸಿನಿಮಾಕ್ಕಾಗಿ ಬಿಟ್ಟುಕೊಡುವುದು ಸಾಮಾನ್ಯ ಕೊಡುಗೆಯಲ್ಲ ಎಂಬ ಕಾರಣಕ್ಕೆ ಚಿತ್ರತಂಡದ ಹಲವರು ರಾಧಿಕಾ ಪಂಡಿತ್ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದರು.

ಇದನ್ನೂ ಓದಿಯಶ್​ ‘ಟಾಕ್ಸಿಕ್’ ಟ್ರೇಲರ್​ ನೋಡಿ ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ

ನಯನತಾರಾ ಅಂತೂ ರಾಧಿಕಾ ಅವರ ತ್ಯಾಗವನ್ನು ಕೊಂಡಾಡಿದರು. ಗೀತೂ ಮೋಹನ್​​ದಾಸ್ ಸಹ ರಾಧಿಕಾ ಅವರ ತ್ಯಾಗವನ್ನು, ಸಹಿಷ್ಣುತೆಯನ್ನು ಹೊಗಳಿದರು. ಕೊನೆಯಲ್ಲಿ ಮಾತನಾಡಿದ ನಟ ಯಶ್ ಸಹ ಪತ್ನಿಯನ್ನು ಕೊಂಡಾಡಿದರು. ‘ನನ್ನಂಥಹ ವ್ಯಕ್ತಿಯ ಜೊತೆಗೆ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ. ನನ್ನೊಟ್ಟಿಗೆ ಸ್ನೇಹವೇ ಕಷ್ಟ, ನನ್ನೊಟ್ಟಿಗೆ ಗುರುತಿಸಿಕೊಳ್ಳುವುದು ಸಹ ಎಷ್ಟೋ ಜನರಿಗೆ ಕಷ್ಟ ಅಂಥಹುದರಲ್ಲಿ ನನ್ನೊಂದಿಗೆ ಅನುಕಾಲ ಇರುವುದು ಸಾಮಾನ್ಯವಾದ ಸ್ಟ್ರೆಸ್ ಅಲ್ಲ, ಆದರೆ ರಾಧಿಕಾ ಅದನ್ನು ಮಾಡುತ್ತಿದ್ದಾರೆ’ ಎಂದರು ಯಶ್.

ನನ್ನ ಪ್ರತಿ ಸಿನಿಮಾಕ್ಕೂ ನಾನು ನೂರರಷ್ಟು ಶ್ರಮ ಹಾಕುತ್ತೇನೆ. ಆದರೆ ಈ ಸಿನಿಮಾದ ಪರಿಸ್ಥಿತಿ ಭಿನ್ನವಾಗಿತ್ತು. ನಾನು ಸಂಪೂರ್ಣವಾಗಿ ಇದರಲ್ಲಿ ತೊಡಗಿಸಿಕೊಳ್ಳಬೇಕಿತ್ತು. ಪ್ರತಿದಿನವೂ ಹೋರಾಟದಂತೆ ಇರುತ್ತಿತ್ತು. ನಾನು ಬಹಳಷ್ಟು ಸಮಯವನ್ನು ಇದಕ್ಕಾಗಿ ಕೊಡಬೇಕಿತ್ತು. ನ್ನ ಗೈರು ಹಾಜರಿಯಲ್ಲಿ ಅವರು ಎಲ್ಲವನ್ನೂ ಮ್ಯಾನೇಜ್ ಮಾಡಿದ್ದಾರೆ. ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ನಂಬಿಕೆ ಏನೆಂದರೆ ಯಾರ ತ್ಯಾಗವೂ ವ್ಯರ್ಥ ಆಗುವುದಿಲ್ಲ. ಎಲ್ಲದರ ಪ್ರತಿಫಲ ಸಿಕ್ಕೆ ಸಿಗುತ್ತದೆ. ಕೆಲಸ, ಸಂಬಂಧ ಯಾವುದೇ ಆಗಿರಲಿ, ಪ್ರಾಮಾಣಿಕವಾಗಿರಬೇಕು, ಸತ್ಯವಂತರಾಗಿರಬೇಕು ಅಷ್ಟೆ’ ಎಂದು ಪತ್ನಿಯನ್ನು ಕೊಂಡಾಡಿದರು ನಟ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *