ಶಿವಮೊಗ್ಗ, ಏಪ್ರಿಲ್ 23: ತಂದೆ ಸಾವಿನ ನಡುವೆಯೂ SSLC ಪರೀಕ್ಷೆ ಬರೆದ ಶಿವಮೊಗ್ಗದ ವಿದ್ಯಾರ್ಥಿಯೋರ್ವ ಉತ್ತೀರ್ಣನಾಗಿದ್ದಾನೆ. ತಾಲೂಕಿನ ಧ್ಯಾವನಕೆರೆ ಗ್ರಾಮದ ವಿದ್ಯಾರ್ಥಿ ಪ್ರೀತಮ್ ತಂದೆ ಗಣಿತ ಪರೀಕ್ಷೆಯ ಹಿಂದಿನ ದಿನ ನಿಧನರಾಗಿದ್ದರು. ಕುಟುಂಬ ದುಃಖದಲ್ಲಿದ್ದ ಕಾರಣ ಪ್ರೀತಮ್ ಪರೀಕ್ಷೆ ಬರೆಯುವ ಮನಸ್ಥಿತಿಯಲ್ಲಿ ಇರಲಿಲ್ಲ. ಈ ವಿಷಯ ತಿಳಿದ ಶಿವಮೊಗ್ಗದ ಬಿಇಓ ಬಿ. ರಮೇಶ್ ಅವರು ಪ್ರೀತಮ್ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿ ಮತ್ತು ಅವರ ತಾಯಿಯನ್ನು ಮನವೊಲಿಸಿದ್ದರು. ಬಿಇಒ ಅವರ ಧೈರ್ಯದ ಮಾತುಗಳ ನಂತರ ಪ್ರೀತಮ್ ಗಣಿತ, ಹಿಂದಿ ಮತ್ತು ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆಗಳನ್ನು ಬರೆದಿದ್ದ. ಇಂದು ಪ್ರಕಟವಾದ ಫಲಿತಾಂಶದಲ್ಲಿ ಪ್ರೀತಮ್ ಶೇ.50 ಅಂಕಗಳೊಂದಿಗೆ ಯಶಸ್ವಿಯಾಗಿ ಉತ್ತೀರ್ಣವಾಗಿದ್ದು, ಬಿಇಓ ರಮೇಶ್ ಅವರು ಪ್ರೀತಮ್ ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
