ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್ – Kannada News | Darshan’s wife Vijayalakshmi Darshan warns fans

ಅಭಿಮಾನಿಗಳೇ ದರ್ಶನ್​​ಗೆ (Darshan) ಕಂಟಕ ಆಗುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದಾಗ ಅವರ ಅಭಿಮಾನಿಗಳು ಮಾಡಿದ ಅಬ್ಬರದಿಂದ ದರ್ಶನ್ ಅವರಿಗೆ ನೆಗೆಟಿವ್ ಇಮೇಜು ಪ್ರಾಪ್ತಿಯಾಯ್ತು. ಪೊಲೀಸರು, ಮಾಧ್ಯಮಗಳ ಮೇಲೆ ಸುಖಾ ಸುಮ್ಮನೆ ಟೀಕೆ, ನಿಂದನೆಗಳನ್ನು ದರ್ಶನ್ ಅಭಿಮಾನಿಗಳು ಮಾಡಿದ್ದರು. ಅದನ್ನು ನ್ಯಾಯಾಲಯ ಸಹ ಗಮನಿಸಿತ್ತು. ಇತ್ತೀಚೆಗೆ ಸಿಎಂ ಭಾಷಣದ ವೇಳೆ ಸಹ ದರ್ಶನ್ ಅಭಿಮಾನಿಗಳು ಹುಚ್ಚಾಟ ಮೆರೆದರು. ಅದನ್ನು ಡಿಕೆ ಶಿವಕುಮಾರ್ ಅವರು ಭಾಷಣದಲ್ಲಿಯೇ ಖಂಡಿಸಿದರು. ಇದೀಗ ವಿಜಯಲಕ್ಷ್ಮಿ ಅವರು ಮದುವೆಯೊಂದರಲ್ಲಿ ಭಾಗಿಯಾಗಿದ್ದಾಗಲೂ ಕೆಲವರು ‘ಡಿ ಬಾಸ್’ ಎಂದು ಘೋಷಣೆ ಕೂಗಿದ್ದಾರೆ. ಆಗ ನಗುತ್ತಲೇ ವಿಜಯಲಕ್ಷ್ಮಿ ಅವರು ಬುದ್ಧಿವಾದ ಹೇಳಿದ್ದು, ‘ಹೀಗೆ ಮಾಡುವುದು ಸರಿಯಲ್ಲ, ಇದರಿಂದ ತೊಂದರೆ ಆಗುತ್ತಿದೆ’ ಎಂದು ನಗುತ್ತಲೇ ಎಚ್ಚರಿಕೆ ಕೊಟ್ಟರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *