
ಇತ್ತೀಚೆಗಷ್ಟೆ ಕನ್ನಡದ ಮೂರು ಸಿನಿಮಾಗಳ (Cinema) ಮುಹೂರ್ತ ಒಟ್ಟಿಗೆ ನಡೆದಿದೆ. ‘ದರ್ಶನ’, ‘ಸೀತಾರಾಮ ರಾಜು’ ಮತ್ತು ‘ಕಾಡ’ ಸಿನಿಮಾದ ಮುಹೂರ್ತಗಳು ಒಟ್ಟಿಗೆ ನಡೆದಿದ್ದು, ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಮುಖ ನಟ, ನಟಿಯರು ಮುಹೂರ್ತದಲ್ಲಿ ಹಾಜರಾಗಿದ್ದರು. ಮಾಧ್ಯಮಗಳೊಟ್ಟಿಗೆ ಸಿನಿಮಾಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೃಥ್ವಿ ಅಂಬರ್ ನಟಿಸುತ್ತಿರುವ ‘ದರ್ಶನ’ ಸಿನಿಮಾನಲ್ಲಿ ನಟಿಸಲಿರುವ ಪೋಷಕ ನಟ ತಬಲಾ ನಾಣಿ ಮುಹೂರ್ತದ ವೇಳೆ ಮಾತನಾಡಿದ್ದು, ಅವರ ತಮಾಷೆ ಮಾತುಗಳು ಕೇಳಿ ಸಭಿಕರು ನಕ್ಕು ಹಗುರಾದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ