ಬೆಂಗಳೂರು, ಜುಲೈ 16: ‘‘ನಮ್ಮ ಸರ್ಕಾರದ ಅವಧಿಯಲ್ಲಿ ಕಂಬಳ ನಡೆಸಲು ಅನುದಾನ ನೀಡಿದ್ದರು. ಈಗ ಪ್ರತಿ ಕಂಬಳಕ್ಕೆ 5 ಲಕ್ಷ ರೂ. ಕೊಡಿ ಅಂತಾ ಕೇಳಿದ್ದೇವೆ ಕೊಟ್ಟಿಲ್ಲ. ಯಾವುದೋ ಒಂದು ಕಂಬಳಕ್ಕೆ 8 ಕೋಟಿ ರೂ ಕೊಡೋದಾದರೆ ದಕ್ಷಿಣ ಕನ್ನಡ ಕಂಬಳಕ್ಕೆ 25 ಲಕ್ಷ ರೂ ಕೊಡಿ’’ ಎಂದು ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ. ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ವಿಚಾರವಾಗಿ ಮಾತನಾಡಿದ ಅವರು, ‘‘ದಸರಾದಲ್ಲಿ ಕಂಬಳ ನಡೆಸಬೇಕೋ, ಬೇಡವೋ ಅಂತಾ ಚರ್ಚೆ ಶುರುವಾಗಿದೆ. ಯಾವುದೇ ಉತ್ಸವ ಬೇರೆ ಪ್ರದೇಶಕ್ಕೆ ಹೋಗಲು ಭಿನ್ನಾಭಿಪ್ರಾಯವಿಲ್ಲ. ಕರಾವಳಿ ಕಂಬಳಕ್ಕೆ ಸಾಂಸ್ಕೃತಿಕ ಸೊಗಡು, ಧಾರ್ಮಿಕ ಭಾವನೆ ಇದೆ. ಅದನ್ನು ಬೇರೆಡೆಗೆ ಕೊಂಡೊಯ್ದಾಗ ಅದನ್ನು ಎಲ್ಲರೂ ಸ್ವೀಕರಿಸಬೇಕು. ನಾನೂ ಕೂಡ ಕಂಬಳ ಆಯೋಜಿಸುವ ವ್ಯಕ್ತಿ. ದಸರಾ ಸಮಿತಿ ಕಂಬಳ ಮಾಲೀಕರು, ಅಭಿಮಾನಿಗಳ ಜೊತೆ ಚರ್ಚಿಸಿಲ್ಲ. ಕೇವಲ ಒಬ್ಬರೇ ಕಂಬಳ ಮಾಡುವುದಾಗಿ ತೀರ್ಮಾನ ಸರಿಯಲ್ಲ, ಕಂಬಳ ಮಾಲೀಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿತ್ತು’’ ಎಂದು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
