ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾರ್ಯ ವೈಫಲ್ಯ, ಅತಿಯಾದ ಹತಾಶೆ – Kannada News | Horoscope May 13 Wednesday 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಮ್ಮ ಪ್ರಾಮಾಣಿಕತೆ ಇತರರ ಗಮನ ಸೆಳೆಯುತ್ತದೆ. ಕೆಲಸದಲ್ಲಿ ಚಿಕ್ಕ ವಿಳಂಬ ಸಂಭವಿಸಬಹುದು, ತಾಳ್ಮೆಯಿಂದಿರಿ. ನಿಮ್ಮ ಯೋಜನೆಗಳಿಗೆ ಪೂರಕವಾದ ಅವಕಾಶಗಳು ಎದುರಾಗಬಹುದು. ಮನೆಯ ಕೆಲಸವನ್ನು ಬೇರೆಯವರಿಗೆ ಹೇಳಿದರೂ ನೀವೇ ಮಾಡಬೇಕಾಗುವುದು. ಇಂದು ಹೊಸ ಕಲಿಕೆಯ ಹಂಬಲವಿರಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ.

ವೃಷಭ ರಾಶಿ:

ಆದಷ್ಟು ನೆಮ್ಮದಿ ನೀಡುವ ಕೆಲಸಗಳಲ್ಲಿ ತೊಡಗಿಕೊಳ್ಳಿ. ಹಣಕಾಸು ಪರಿಸ್ಥಿತಿ ಸ್ಥಿರವಾಗಿರುತ್ತದೆ. ನಿಮ್ಮ ಆದರ್ಶಗಳ ಬಗ್ಗೆ ಯೋಚನೆ ಮಾಡುವ ದಿನ. ಸ್ನೇಹಿತರಿಂದ ಪ್ರೇರಣಾ ಮಾತುಗಳು ಸಿಗಬಹುದು. ವ್ಯವಸ್ಥೆ ಸರಿಯಾಗಲು ಎಲ್ಲ ಪ್ರಯೋಗವನ್ನೂ ಮಾಡಿ ಬತ್ತಳಿಕೆ ಖಾಲಿ ಮಾಡಿಕೊಳ್ಳುವಿರಿ. ಬದಲಾವಣೆಯ ಶಕ್ತಿ ಇವತ್ತು ನಿಮ್ಮ ಪಕ್ಕದಲ್ಲಿದೆ. ಉದ್ವೇಗಕ್ಕೆ ಒಳಗಾಗದೇ ಕಾರ್ಯಗಳನ್ನು ನಿರ್ವಹಿಸಿ. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ.

ಮಿಥುನ ರಾಶಿ:

ಇಂದು ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ಆದಾಯ ಅಧಿಕ ಹಾಗೂ ಹಣವನ್ನು ಪಡೆಯಲು ಕಷ್ಟಪಡುವಿರಿ. ಆರ್ಥಿಕವಾಗಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು, ತಾಳ್ಮೆ ಇರಲಿ. ಇಂದು ನಿಮ್ಮ ಮಾತುಗಳು ಪರಿಣಾಮಕಾರಿ ಆಗಬಲ್ಲವು ಜವಾಬ್ದಾರಿಯಿಂದ ಮಾತನಾಡಿ. ಕೆಲವರಿಂದ ಭೀತಿಯಾಗುವುದು. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು.

ಕರ್ಕಾಟಕ ರಾಶಿ:

ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನು ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ತಾಳ್ಮೆಯ ಪರೀಕ್ಷೆ ಇಂದಾಗನಹುದು. ಕೆಲಸದ ಒತ್ತಡ ಹೆಚ್ಚಾಗಿ ತೋರುತ್ತಾದರೂ, ನೀವು ಅದನ್ನು ಶ್ರದ್ಧೆಯಿಂದ ನಿಭಾಯಿಸಬಹುದು. ಹಣಕಾಸು ವಿಚಾರದಲ್ಲಿ ಚುರುಕಾಗಿ ಯೋಚಿಸಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಯಾವಿದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು.

ಸಿಂಹ ರಾಶಿ:

ಕೆಲಸದಲ್ಲಿ ನಿಮ್ಮ ಶ್ರಮ ಗುರುತಿಸಲ್ಪಡುತ್ತದೆ. ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ನಿಮ್ಮ ಗೆಲವು ತೃಪ್ತಿದಾಯಕವಾಗಿರದು. ಕುಟುಂಬದೊಂದಿಗಿನ ಸಂಬಂಧ ಬಲವಾಗುತ್ತದೆ. ಆತ್ಮವಿಶ್ವಾಸದಿಂದ ಮಾತನಾಡಿ. ಅದು ನಿಮಗೆ ಮುನ್ನಡೆಯಲು ಮಾರ್ಗವಾಗುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಬರುತ್ತದೆ. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು.

ಕನ್ಯಾ ರಾಶಿ :

ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಬಂಧುಗಳು ನಿಮ್ಮನ್ನು ಬೇಸರಿಸುವರು. ಆತ್ಮವಿಶ್ವಾಸ ಹೆಚ್ಚಾಗಲು ಕೆಲವು ಸಣ್ಣ ಜವಾಬ್ದಾರಿಗಳನ್ನು ಹೊರಬೇಗುತ್ತದೆ. ಹಳೆ ಯೋಜನೆಯ ವ್ಯವಹಾರವನ್ನು ಮುಗಿಸಿಕೊಳ್ಳುವಿರಿ. ಮನಸ್ಸಿನಲ್ಲಿ ಹಳೆಯ ನೆನಪುಗಳು ಬರುವ ಸಾಧ್ಯ. ಮಕ್ಕಳ ಅನಾರೋಗ್ಯದಿಂದ ನೀವು ಆತಂಕಕ್ಕೆ ಒಳಗಾಗುವಿರಿ. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ನಿಮ್ಮನ್ನು ಕಾಡಬಹುದು.

ತುಲಾ ರಾಶಿ:

ಪಾಲುದಾರಿಕೆಯಲ್ಲಿ ಉಂಟಾಗುವ ಕಲಹವನ್ನು ಆರಂಭದಲ್ಲಿಯೇ ನಿಲ್ಲಿಸಿ. ಯೋಜನೆಗಳು ನಿಧಾನವಾಗಿಯೇ ಮುಂದುವರಿಯಿಲಿ. ಗಡಿಬಿಡಿಯನ್ನು ಮಾಡಿಕೊಳ್ಳುವುದು ಬೇಡ. ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ. ಹಣಕಾಸಿನಲ್ಲಿ ನಿರೀಕ್ಷೆಗಿಂತ ಹೆಚ್ಚು ಖರ್ಚು ಆಗಬಹುದು. ಹಳೆಯ ಸ್ನೇಹಿತನಿಂದ ಸಿಹಿ ಸುದ್ದಿ ಬರುತ್ತದೆ. ಸ್ತ್ರೀಯರು ಆಭರಣಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಚರಾಸ್ತಿಯು ಬೇಜವಾಬ್ದಾರಿಯಿಂದ ಅನ್ಯರ ಪಾಲಾಗಬಹುದು.

ವೃಶ್ಚಿಕ ರಾಶಿ:

ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ಯಂತ್ರಗಳಿಂದ ನಿಮಗೆ ನೋವಾಗುವ ಸಾಧ್ಯತೆ ಇದೆ. ದೂರದ ಪ್ರದೇಶಗಳಿಗೆ ಹೋಗಿ ನಿರಾಸೆ ಆಗಬಹುದು. ಮಾತಿನ ಪರಿಣಾಮ ಇಂದು ಹೆಚ್ಚಾಗಬಹುದು. ಜವಾಬ್ದಾರಿಯುತವಾಗಿ ಮಾತನಾಡಿ. ಉತ್ಸಾಹದಿಂದ ಕೆಲಸಗಳನ್ನು ಆರಂಭಿಸಿ. ನಿಮ್ಮ ಸಂಗಾತಿಯ ಮೇಲೆ ಕಛೇರಿಯಲ್ಲಿ ಆದ ವೈಮನಸ್ಯದಿಂದ ಮುನಿಸಿಕೊಳ್ಳಬಹುದು. ಹೂಡಿಕೆಯ ವಿಚಾರದಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಿ.

ಧನು ರಾಶಿ:

ಹಿಂದುಳಿದ ಕಾರ್ಯಗಳು ಪ್ರಗತಿಯನ್ನು ಕಾಣುವುವು. ಲಾಭವನ್ನು ಪಡೆಯಲು ನೂತನ ಯೋಜನೆಯನ್ನು ಮಾಡುವಿರಿ. ಆರ್ಥಿಕ ವಿಚಾರದಲ್ಲಿ ಬೌದ್ಧಿಕ ಸಮತೋಲನ ಅಗತ್ಯ. ಸೃಜನಾತ್ಮಕ ಕೆಲಸಗಳಲ್ಲಿ ನಿರತರಾಗಬಹುದು. ಇಂದು ಹೊಸ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಅಲ್ಪ ಧನವನ್ನು ಕಳೆದುಕೊಳ್ಳುವಿರಿ. ಮಕ್ಕಳ ಶ್ರಮದಿಂದ ಪಾಲಕರಿಗೆ ನೆಮ್ಮದಿ ಇರಲಿದೆ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು.

ಮಕರ ರಾಶಿ:

ನಿಮ್ಮ ನಡುವೆ ಪರಸ್ಪರ ಕಾಳಜಿಯು ಗೊತ್ತಾಗುವ ಸಾಧ್ಯತೆ ಇದೆ. ದುಃಖಗಳನ್ನು ಬಿಟ್ಟು ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಈ ದಿನ ಮನಸ್ಸು ಲಘುವಾಗುತ್ತದೆ. ಅನಾವಶ್ಯಕ ಖರ್ಚು ತಪ್ಪಿಸಿಕೊಳ್ಳಿ. ನಿರ್ಧಾರ ತೆಗೆದುಕೊಳ್ಳುವ ಮೊದಲು ಶಾಂತವಾಗಿ ಯೋಚಿಸಿ. ಸ್ನೇಹಿತನೊಂದಿಗೆ ಕಲಹವಾಗುವ ಸಾಧ್ಯತೆ ಇದೆ, ತಾಳ್ಮೆ ಇರಲಿ. ಶಿಕ್ಷಕವೃತ್ತಿಯವರು ಉನ್ನತ ಸ್ಥಾನದ ನಿರೀಕ್ಷೆಯಲ್ಲಿ ಇರುವರು. ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ.

ಕುಂಭ ರಾಶಿ:

ಹಣಕಾಸು ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಕೆಲಸದ ಒತ್ತಡ ಕಡಿಮೆಯಾಗಬಹುದು. ಹೊಸ ಗುರಿಗಳ ಬಗ್ಗೆ ಯೋಚಿಸಲು ಶುಭ ಸಮಯ. ಅವಕಾಶಗನ್ನು ಯಾರಿಗೂ ಬಿಟ್ಟುಕೊಡದೇ ನೀವೇ ಅನುಭವಿಸಿ. ಭೂಮಿಯನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳ ಒಡನಾಟವು ಹಿತವೆನಿಸುವುದು.

ಮೀನ ರಾಶಿ:

ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿ‌ ಎಂದು ದೇವರಲ್ಲಿ ಪ್ರಾರ್ಥಿಸಿ. ದೂರದ ಊರಿಗೆ ಕಾರ್ಯದ ಕಾರಣ ಪ್ರಯಾಣ ಮಾಡುವ ಸಂಭವವಿದೆ. ಉದ್ಯೋಗವನ್ನು ಕರಗತ ಮಾಡಿಕೊಂಡು ಲೀಲಾಜಾಲವಾಗಿ ಮಾಡಿ ಮುಗಿಸುವಿರಿ. ಮಕ್ಕಳು ನಿಮಗೆ ಶುಭವಾರ್ತೆಯನ್ನು ಕೇಳಿಸುವರು‌. ದಾಂಪತ್ಯದ ಸುಖಜೀವನವು ಅನುಭವಕ್ಕೆ ಬರಲಿದೆ. ಆಭರಣ ಮಾರಾಟಗಾರು ಲಾಭವನ್ನು ಗಳಿಸಬಹುದು. ಇಂದಿನ ಬಹುಪಾಲು ಸಮಯವನ್ನು ಬೇರೆ ಯಾವುದೋ ಚಿಂತನೆಯಲ್ಲಿ ಕಳೆಯುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ವಿಷ್ಕಂಭ, ಕರಣ : ಕೌಲವ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:31 – 13:56, ಯಮಗಂಡ ಕಾಲ 07:34 – 09:10, ಗುಳಿಕ ಕಾಲ 10:45 – 12:21

-ಲೋಹಿತ ಹೆಬ್ಬಾರ್ – 8762924271 (what’s app only)

Source link

Leave a Reply

Your email address will not be published. Required fields are marked *