Headlines

‘ಧರ್ಮನ್’ ಚಿತ್ರದಲ್ಲಿ ನಿರ್ದೇಶಕರಿಗೆ ಅಸಿಸ್ಟಂಟ್ ಆದ ರಜನಿಕಾಂತ್ – Kannada News | Rajinikanth’s Humble Advice to Ashwath Marimuthu for ‘Dharman’ Wins Hearts

ತಮಿಳು ನಿರ್ದೇಶಕ ಅಶ್ವತ್ಥ್ ಮಾರಿಮುತ್ತು ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ‘ಧರ್ಮನ್’ ಚಿತ್ರದ ಕುರಿತು ರಜನಿ ಹೇಳಿದ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆಲ್ಲುತ್ತಿವೆ. ಈ ಚಿತ್ರದ ಪೋಸ್ಟರ್ ಜೂನ್ 24ರಂದು ರಿಲೀಸ್ ಆಗಿ ಗಮನ ಸೆಳೆದಿದೆ.

ರಜನಿಕಾಂತ್ ಸರಳತೆ

ಅಶ್ವತ್ಥ್ ಪ್ರಕಾರ ರಜನಿಕಾಂತ್ ಅವರು ಭಾರತೀಯ ಚಿತ್ರರಂಗದ ಇಷ್ಟು ದೊಡ್ಡ ತಾರೆಯಾಗಿದ್ದರೂ ಅತ್ಯಂತ ವಿನಮ್ರವಾಗಿ ನಡೆದುಕೊಂಡಿದ್ದಾರಂತೆ. ಅವರು ಈ ಪ್ರಾಜೆಕ್ಟ್‌ಗೆ ತಾವೇ ಮುಂದೆ ಬಂದು ಬೆಂಬಲ ಸೂಚಿಸಿದ್ದಾರೆ ಎಂದು ಅಶ್ವತ್ಥ್ ವಿವರಿಸಿದ್ದಾರೆ.

‘ನಾವು ಯಾವುದೇ ಪರಿಸ್ಥಿತಿಯಲ್ಲೂ ಗೆಲ್ಲಲೇಬೇಕು. ನಾವು ಈ ಸಿನಿಮಾವನ್ನು ಕಮಲ್ ಹಾಸನ್ ಅವರ ಆರ್‌ಕೆಎಫ್‌ಐ ಬ್ಯಾನರ್ ಅಡಿಯಲ್ಲಿ ಮಾಡುತ್ತಿದ್ದೇವೆ. ಆದ್ದರಿಂದ ನನ್ನನ್ನು ನಿಮ್ಮ ಅಸಿಸ್ಟೆಂಟ್ ಎಂದು ಅಂದುಕೊಳ್ಳಿ. ನಾನು ಕೆಲವು ಸಲಹೆಗಳನ್ನು ನೀಡುತ್ತೇನೆ. ಅವುಗಳನ್ನು ಸ್ವೀಕರಿಸುವುದು ಅಥವಾ ಬಿಡುವುದು ನಿಮಗೆ ಬಿಟ್ಟಿದ್ದು’ ಎಂದು ರಜನಿ ಸಲಹೆ ನೀಡಿದ್ದಾಗಿ ಅಶ್ವತ್ಥ್​ ವಿವರಿಸಿದ್ದಾರೆ.

ಅಭಿಮಾನಿಗಳ ಮೆಚ್ಚುಗೆ

ರಜನಿಕಾಂತ್ ಅವರ ಈ ಮಾತುಗಳು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿವೆ. ಅವರ ಡೌನ್ ಟು ಅರ್ಥ್ ಸ್ವಭಾವಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಯುವ ನಿರ್ದೇಶಕನ ಕಲ್ಪನೆಗೆ ರಜನಿ ನೀಡಿದ ಗೌರವವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಚಿತ್ರದ ಹಿನ್ನೆಲೆ ‘ಧರ್ಮನ್’ ಚಿತ್ರವನ್ನು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾ ತಮಿಳು ಚಿತ್ರರಂಗದಲ್ಲಿ ಸದ್ಯ ಭಾರೀ ನಿರೀಕ್ಷೆ ಮೂಡಿಸಿದೆ. ನಟಿಯರಾದ ಸಿಮ್ರಾನ್ ಮತ್ತು ರಾಶಿ ಖನ್ನಾ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *