ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು – Kannada News | Kannada actor Vajramuni Life Story Death Reason and other details

ಕನ್ನಡ ಚಿತ್ರರಂಗದಲ್ಲಿ (Kannada Film Industry) ನಟ ವಜ್ರಮುನಿ ಅವರು ತಮ್ಮದೇ ಛಾಪು ಮೂಡಿಸಿದ್ದರು. ಬಹುಬೇಡಿಕೆಯ ನಟನಾಗಿ ಅವರು ಮಿಂಚಿದ್ದರು. ಹೀರೋಗಳಿಗಿಂತ ವಜ್ರಮನಿ ಅವರೇ ಹೈಲೈಟ್ ಆಗುತ್ತಿದ್ದ ದಿನಗಳು ಅವು. ಸಿನಿಮಾದಲ್ಲಿ ವಿಲನ್ ಆದರೂ ರಿಯಲ್ ಲೈಫ್​​ನಲ್ಲಿ ವಜ್ರಮುನಿ ಅವರು ಮೃದು ಸ್ವಭಾವದ ವ್ಯಕ್ತಿ ಆಗಿದ್ದರು. ನಟನಾಗಿ ಫೇಮಸ್ ಆದ ಅವರು ನಿರ್ಮಾಪಕನಾಗಿಯೂ ಅದೃಷ್ಟಪರೀಕ್ಷೆ ಮಾಡಿಕೊಂಡರು. ನಿರ್ಮಾಪಕನಾದ ಬಳಿಕ ಅವರು ಸಾಲದ ಸುಳಿಗೆ ಸಿಲುಕಿದರು. ನಂತರದ ದಿನಗಳಲ್ಲಿ ವಜ್ರಮುನಿ (Vajramuni) ಅವರಿಗೆ ಆರೋಗ್ಯ ಕೈಕೊಟ್ಟಿತು. ಅದರಿಂದಾಗಿ ಅವರ ಕೊನೆಯ ದಿನಗಳು ನರಕ ಸದೃಶ್ಯ ಆಗಿದ್ದವು. ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡವು. ಶುಗರ್ ಮತ್ತು ರಕ್ತಹೀನತೆಯಿಂದ ಕಣ್ಣು ಕಾಣದಂತಾಯಿತು. ಕಿವಿ ಕೇಳಿಸುತ್ತಿರಲಿಲ್ಲ. ಅನೇಕ ಕಾಯಿಲೆಗಳಿಂದ ಅವರು 2006ರ ಜನವರಿ 5ರಂದು ನಿಧನರಾದರು. ಅವರು ಇಹಲೋಕ ತ್ಯಜಿಸಿ 20 ವರ್ಷ ಕಳೆದಿದೆ. ವಜ್ರಮುನಿ ರೀತಿಯ ಮತ್ತೋರ್ವ ಖಳನಟ ಕನ್ನಡ ಚಿತ್ರರಂಗದಲ್ಲಿ ಬರಲೇ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *