ರಾಯಚೂರು, ಆಗಸ್ಟ್ 17: ಬದುಕಿರುವ ವ್ಯಕ್ತಿಯನ್ನೇ ಮೃತಪಟ್ಟಿದ್ದಾರೆಂದು ನಕಲಿ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸಿರುವ ಘಟನೆ ಮಾನ್ವಿಯಲ್ಲಿ ಬೆಳಕಿಗೆ ಬಂದಿದೆ. ಬಹ್ರೇನ್ನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಮೊಹಮದ್ ಶರ್ಫುದ್ದಿನ್ ಕಷ್ಟಪಟ್ಟು 6 ಮನೆ ಹಾಗೂ 2 ಅಂಗಡಿಗಳನ್ನು ಖರೀದಿಸಿದ್ದರು. ಹೆಂಡತಿ ರಸೂಲ್ ಬೀ ನಿಧನದ ಬಳಿಕ, ಕರೀಷ್ಮಾ ಎಂಬುವವರು ಶರ್ಫುದ್ದಿನ್ ಅವರ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
“ಸ್ವಾಮಿ ನಾನು ಸತ್ತಿಲ್ಲ, ಬದುಕಿದ್ದೇನೆ. ನನ್ನ ಆಸ್ತಿ ಮರಳಿಸಿಕೊಡಿ” ಎಂದು ವೃದ್ಧ ಶರ್ಫುದ್ದಿನ್ ಜಿಲ್ಲಾಧಿಕಾರಿ ಕಚೇರಿ ಹಾಗೂ ಪುರಸಭೆಗೆ ಅಲೆದಾಡುತ್ತಿದ್ದು, ಹೆಂಡತಿಯೂ ಇಲ್ಲದೆ, ಆಸ್ತಿಯೂ ಸಿಗದೆ ಭಿಕ್ಷುಕನಂತಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ