ಕೊಪ್ಪಳ, (ಏಪ್ರಿಲ್ 20): ಇತ್ತೀಚೆಗೆ ಕೊಪ್ಪಳದಲ್ಲಿ ಜಿಲ್ಲೆಗಯಲ್ಲಿ ಮೂರ್ತಿಗಳ ಭಗ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂಬೇಡ್ಕರ್ ಹಾಗೂ ದೇವರುಗಳ ಮೂರ್ತಿಗಳಿಗೆ ಕಿಡಿಗೇಡಿಗಳು ಹಾನಿ ಮಾಡುತ್ತಿದ್ದಾರೆ. ಮೂರ್ತಿಗಳ ಬಳಿ ಸಿಸಿ ಟಿವಿ ಅಳವಡಿಸಲು ನಿರ್ದೇಶನ ಮಾಡುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ (Basavaraj rayareddy) ,ನಾನ ಮಾಡಲ್ಲ, ಸರ್ಕಾರ ಮಾಡಬೇಕು. ಶಾಸಕರಿಗೆ ಅಧಿಕಾರ ಇರಲ್ಲ. ಮಂತ್ರಿಗೆ ಅಧಿಕಾರ ಇರತ್ತೆ. ನಾನು ಸಲಹೆಗಾರ ಮಾತ್ರ. ಮಂತ್ರಿ ಅಲ್ಲ. ನನನೆ ಸಚಿವ ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ. ಆದ್ರೆ ನಾನು ಸರ್ಕಾರ ಅಲ್ಲ, ಸರ್ಕಾರ ಅಂದ್ರೆ ಮಂತ್ರಿ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
