ಲಕ್ನೋ, ಏಪ್ರಿಲ್ 14: ಕಳ್ಳನೊಬ್ಬ ಕಳ್ಳತನ ಮಾಡಿ ಓಡಿ ಹೋಗುವಾಗ ಶೆಟರ್ ಹಾಗೂ ಗೋಡೆಯ ಮಧ್ಯದಲ್ಲಿ ತಲೆ ಸಿಕ್ಕಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಇಂದಿರಾಪುರಂ ಪ್ರದೇಶದ ಅಭಯ್ ಖಾಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕಳ್ಲನೊಬ್ಬ ಹೃದ್ರೋಗ ತಜ್ಞರ ಚಿಕಿತ್ಸಾಲಯದ ಮೇಲ್ಛಾವಣಿಯ ಮೂಲಕ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಹಿಂದೆ ಬರಲೂ ಆಗದೆ ಮುಂದೆ ಹೋಗಲೂ ಆಗದೆ ಫಜೀತಿ ಅನುಭವಿಸಿದ್ದಾನೆ.ಆತ ಕೂಗಿಕೊಂಡಾಗ ನಿಕ್ ಸಿಬ್ಬಂದಿ ವಿಷಯ ಗೊತ್ತಾಗಿತ್ತು. ಪೊಲೀಸರಿಗೆ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸುವುದು ಕೂಡ ಕಷ್ಟದ ಕೆಲಸವಾಗಿತ್ತು. ಎಚ್ಚರಿಕೆಯಿಂದ ಕೆಲವು ಉಪಕರಣಗಳನ್ನು ಬಳಸಿ ಕೊನೆಗೂ ಆತನನ್ನು ಬಿಡುಗಡೆಗೊಳಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ