ಗದಗ, ಮೇ 07: ಜಿಲ್ಲೆಯಲ್ಲಿ ಸುಡುವ ಬಿಸಿಲಿಗೆ ಮನುಷ್ಯರು ಮಾತ್ರ ಅಲ್ಲ, ಪ್ರಾಣಿಗಳೂ ಬಳಲುತ್ತಿವೆ. ಸರಿಯಾದ ಹೊತ್ತಿಗೆ ನೀರು, ಆಹಾರ ಸಿಗದ ಜೀವಿಗಳು ಕಂಗೆಟ್ಟುಹೋಗಿವೆ. ಹೀಗಿರುವಾಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ರಸ್ತೆಯ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರನ್ನು ಅಲ್ಲಿನ ಮಂಗಗಳು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ. ಈ ದೃಶ್ಯವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮನಕಲಕುವಂತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
