ಪಠ್ಯಪುಸ್ತಕ ಮುದ್ರಿಸಿ ವಿತರಿಸಿದರೂ ಸಿಗದ ಹಣ: ಅಧಿಕಾರಿಗಳ ಎಡವಟ್ಟಿಗೆ ಮುದ್ರಕರು ಕಂಗಾಲು, ಸಿಎಂಗೆ ದೂರು ನೀಡಲು ಚಿಂತನೆ – Kannada News | Karnataka Textbook Printers Bill Payment Delayed As Education Dept Officials Return Released Funds

ಬೆಂಗಳೂರು, ಜೂನ್ 23: ರಾಜ್ಯದಲ್ಲಿ ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುದ್ರಕರು ತೀವ್ರ ಒತ್ತಡದ ನಡುವೆಯೂ ಪಠ್ಯಪುಸ್ತಕಗಳನ್ನು (Text Books) ಮುದ್ರಿಸಿ ಸರಬರಾಜು ಮಾಡಿದ್ದರೂ, ಸರ್ಕಾರ ಮಾತ್ರ ಅವರಿಗೆ ಹಣ ಬಿಡುಗಡೆ ಮಾಡದೆ ಮೀನಮೇಷ ಎಣಿಸುತ್ತಿದೆ. ಆರ್ಥಿಕ ಇಲಾಖೆಯಿಂದ (Finance Department) ಬಿಲ್ ಪಾವತಿಗೆ ಅನುಮೋದನೆ ಸಿಕ್ಕಿದ್ದರೂ ಅಧಿಕಾರಿಗಳ ಎಡವಟ್ಟಿನಿಂದಾಗಿ ಹಣ ಕೈಸೇರದೆ ಮುದ್ರಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಖ್ಯಾಂಶಗಳು

  • ಪುಸ್ತಕ ಪೂರೈಸಿದರೂ ಮುದ್ರಕರಿಗೆ ಸಿಗದ ಬಿಲ್.
  • ಅಧಿಕಾರಿಗಳ ಬೇಜವಾಬ್ದಾರಿಯಿಂದ ವಾಪಸ್ ಹೋದ ಹಣ.
  • ಬಾಕಿ ಹಣಕ್ಕಾಗಿ ಸಿಎಂಗೆ ದೂರು ನೀಡಲು ನಿರ್ಧಾರ.

ಒತ್ತಡದ ನಡುವೆ ಪುಸ್ತಕ ನೀಡಿದ್ರೂ ಸಿಗದ ಹಣ

ಈ ಬಾರಿ ಪಠ್ಯಪುಸ್ತಕಗಳ ಮುದ್ರಣಕ್ಕೆ ಟೆಂಡರ್ ಕರೆಯಲು ಶಿಕ್ಷಣ ಇಲಾಖೆಯು 2-3 ತಿಂಗಳು ತಡ ಮಾಡಿತ್ತು. ಆದಾಗ್ಯೂ ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು, ಮುದ್ರಕರು ತೀವ್ರ ಒತ್ತಡದ ನಡುವೆಯೂ ಕೇವಲ 75 ದಿನಗಳಲ್ಲಿ ಪುಸ್ತಕಗಳನ್ನು ಮುದ್ರಿಸಿ ಪಠ್ಯಪುಸ್ತಕ ಸಂಘಕ್ಕೆ ವಿತರಣೆ ಮಾಡಿದ್ದರು. ಆದರೆ, ಸರಬರಾಜು ಮುಗಿದಿದ್ದರೂ ಸರ್ಕಾರ ಮಾತ್ರ ಹಣ ಬಿಡುಗಡೆ ಮಾಡಿಲ್ಲ. ‘ಮಕ್ಕಳ ಪುಸ್ತಕಕ್ಕೂ ಹಣವಿಲ್ಲವೇ’ ಎಂದು ಮುದ್ರಕರು ಈಗ ಪ್ರಶ್ನಿಸುತ್ತಿದ್ದಾರೆ.

ಹಣ ವಾಪಸ್ ಕಳುಹಿಸಿದ ಅಧಿಕಾರಿಗಳು

ಮುದ್ರಕರ ಆಕ್ರೋಶದ ಹಿನ್ನೆಲೆಯಲ್ಲಿ ಜೂನ್ 4 ರಂದು ಒಟ್ಟು ವೆಚ್ಚದಲ್ಲಿ ಅರ್ಧದಷ್ಟು ಹಣವನ್ನು ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಸೂಚನೆ ನೀಡಿತ್ತು. ಹೀಗೆ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿ ಬಂದಿದ್ದ ಅನುದಾನವನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತೆ ವಾಪಸ್ ಕಳುಹಿಸಿದ್ದಾರೆ. ಹಣ ಬಿಡುಗಡೆಗೆ ಸರ್ಕಾರದ ಸೂಚನೆ ಇದ್ದರೂ ಅಧಿಕಾರಿಗಳು ಬಿಲ್ ಪಾವತಿಸುತ್ತಿಲ್ಲ. ಹೀಗಾಗಿ, ಬಿಲ್ ಪಾವತಿಸದ ಅಧಿಕಾರಿಗಳ ವಿರುದ್ಧ ನೇರವಾಗಿ ಮುಖ್ಯಮಂತ್ರಿಗಳಿಗೆ ದೂರು ನೀಡಲು ಮುದ್ರಕರು ಗಂಭೀರ ಚಿಂತನೆ ನಡೆಸಿದ್ದಾರೆ.

ಇದನ್ನೂ ಓದಿ: ಶಾಲೆ ಆರಂಭವಾದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿಲ್ಲ: ರಾಜ್ಯ ಸರ್ಕಾರದ ವಿರುದ್ಧ ಆರ್ ಅಶೋಕ್ ಕಿಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *