ಬೆಂಗಳೂರು, ಜುಲೈ 05: ಸೆಂಟ್ರಲ್ ಜೈಲ್ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಬೆಳೆದ ತರಕಾರಿಯನ್ನು ಕಾರಾಗೃಹ ಇಲಾಖೆಯ ಕಚೇರಿ ಮುಂದೆ ಸಂತೆ ಮಾದರಿಯಲ್ಲಿ ಸಿಬ್ಬಂದಿ ಮಾರಾಟ ಮಾಡಿದ್ದು, ಅಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿ ಅವುಗಳನ್ನು ಮುಗಿಬಿದ್ದು ಖರೀದಿ ಮಾಡಿದ ದೃಶ್ಯಗಳು ಕಂಡುಬಂದಿವೆ. ಕೈದಿಗಳು ಬೆಳೆದ ತರಕಾರಿ ಮಾರಾಟದಂತಹ ವಿನೂತನ ಪ್ರಯತ್ನಕ್ಕೆ ಕಾರಾಗೃಹ ಇಲಾಖೆ ಡಿಜಿ ಅಲೋಕ್ ಕುಮಾರ್ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ತರಕಾರಿಯನ್ನ ಸಂತೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಲೂ ಸಿದ್ದತೆ ನಡೆದಿದೆ. ಕೇವಲ ತರಕಾರಿ ಅಲ್ಲದೆ ಬಟ್ಟೆ ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನ ಸಹ ಮಾರಾಟ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
