ಪ್ರೇಮ ವಿವಾಹ ವಿಚಾರದಲ್ಲಿ ಜಗಳ, ಕೋಪದಲ್ಲಿ ವ್ಯಕ್ತಿಯ ಮೂಗು ಕತ್ತರಿಸಿದ ಜನ – Kannada News | Family Clash Over Love Marriage Turns Violent in Rajasthan

ಬಾರ್ಮರ್, ಡಿಸೆಂಬರ್ 19: ಪ್ರೇಮ ವಿವಾಹ(Love Marriage)ದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ನಡೆದಿರುವ ಘಟನೆ ರಾಜಸ್ಥಾನದ ಬಾರ್ಮರ್​ನಲ್ಲಿ ನಡೆದಿದೆ. ಘಟನೆಯಲ್ಲಿ ವರನ ಅಣ್ಣನ ಮೂಗನ್ನು ಹುಡುಗಿಯ ಮನೆಯವರು ಕತ್ತರಿಸಿರುವ ಅಮಾನವೀಯ ಘಟನೆ ಎದುರಾಗಿದೆ. ಮಹಿಳೆಯ ಕಡೆಯವರು ಮೊದಲು ಹಲ್ಲೆ ನಡೆಸಿದ್ದರು. ಆ ವ್ಯಕ್ತಿಯ ಅಣ್ಣನ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹಾಕಿದರು. ಇದಕ್ಕೆ ಪ್ರತೀಕಾರವಾಗಿ, ಆ ವ್ಯಕ್ತಿಯ ಸಂಬಂಧಿಕರು ಮಹಿಳೆಯ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿ ಅವರ ಕಾಲು ಮುರಿದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

25 ವರ್ಷದ ಶ್ರವಣ್ ಸಿಂಗ್ ಮತ್ತು ಅದೇ ಗ್ರಾಮದ ಹುಡುಗಿಯ ನಡುವಿನ ಪ್ರೇಮ ವಿವಾಹದಿಂದ ಈ ಘರ್ಷಣೆ ಹುಟ್ಟಿಕೊಂಡಿದೆ. ಮಹಿಳೆಯ ಕುಟುಂಬವು ಈ ಮದುವೆಯನ್ನು ಎಂದಿಗೂ ಒಪ್ಪಲಿಲ್ಲ, ಮತ್ತು ಅಂದಿನಿಂದ ಎರಡೂ ಕುಟುಂಬಗಳ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಶ್ರವಣ್ ಸಿಂಗ್ ಈಗ ತನ್ನ ಪತ್ನಿ ಮತ್ತು ಕುಟುಂಬದೊಂದಿಗೆ ಗುಜರಾತ್‌ನಲ್ಲಿ ವಾಸವಿದ್ದಾನೆ. ಶ್ರವಣ್‌ನ ಅಣ್ಣ ಯುಕೆ ಸಿಂಗ್ (35) ಹೊಲದಿಂದ ಹಿಂತಿರುಗುತ್ತಿದ್ದಾಗ ಮಹಿಳೆಯ ಚಿಕ್ಕಪ್ಪ ಧರ್ಮ್ ಸಿಂಗ್ (50) ಮತ್ತು ಅವರ ಸಹಚರರು ಹೊಂಚು ಹಾಕಿ ಹಲ್ಲೆ ನಡೆಸಿದ್ದಾರೆ.

ಅವರು ಯುಕೆ ಸಿಂಗ್ ಅವರ ಮೂಗನ್ನು ಹರಿತವಾದ ಆಯುಧದಿಂದ ಕತ್ತರಿಸಿದ್ದಾರೆ, ಹೇಗೋ ಮನೆ ತಲುಪುವಲ್ಲಿ ಯಶಸ್ವಿಯಾದರು.ಇದರಿಂದ ಕೋಪಗೊಂಡ ಯು.ಕೆ. ಸಿಂಗ್ ಅವರ ಕುಟುಂಬವು ಮಹಿಳೆಯ ಮನೆಯಲ್ಲಿ ಧರ್ಮ್ ಸಿಂಗ್ ಮೇಲೆ ಹಲ್ಲೆ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು, ಇದರಿಂದಾಗಿ ಅವರ ಕಾಲು ತೀವ್ರವಾಗಿ ಮುರಿದು ಹೋಯಿತು.

ಮತ್ತಷ್ಟು ಓದಿ: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಅಗತ್ಯವೇ? ಭಾರತೀಯ ಕಾನೂನು ಹೇಳೋದೇನು?

ಗಾಯಗೊಂಡ ಇಬ್ಬರನ್ನೂ ಗುಡಮಲನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯುಕೆ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಂಚೋರ್‌ಗೆ ಕರೆದೊಯ್ಯಲಾಯಿತು. ಗಂಭೀರ ಸ್ಥಿತಿಯಲ್ಲಿರುವ ಧರ್ಮ್ ಸಿಂಗ್ ಅವರನ್ನು ಜೋಧ್‌ಪುರಕ್ಕೆ ಕಳುಹಿಸಲಾಯಿತು. ಘಟನೆಯ ನಂತರ ಗುಡಮಲನಿ ಪೊಲೀಸ್ ಠಾಣೆಯ ಡಿಎಸ್ಪಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು. ಎರಡೂ ಕಡೆಯ ದೂರುಗಳ ಮೇರೆಗೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರನ ಮೇಲೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಡಿಜೆ ನೃತ್ಯದ ವೇಳೆ ನಡೆದ ಸಣ್ಣಪುಟ್ಟ ವಾಗ್ವಾದದ ನಂತರ 22 ವರ್ಷದ ಸಜಲ್ ರಾಮ್ ಮೇಲೆ ರಾಘೋ ಜಿತೇಂದ್ರ ಬಕ್ಷಿ ಎಂಬಾತ ವೇದಿಕೆಯಲ್ಲಿ ಹಲ್ಲೆ ನಡೆಸಿದ್ದ. ಮದುವೆಯ ವಿಡಿಯೋಗ್ರಾಫರ್ ಮತ್ತು ಆತನ ಸಹಚರ ಬೈಕ್​ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ದಾಳಿಕೋರನನ್ನು ಡ್ರೋನ್ ಮೂಲಕ ಸುಮಾರು ಎರಡು ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *