ಬಳ್ಳಾರಿ ಎಸ್​​ಪಿ ಪವನ್ ನೆಜ್ಜೂರ್ ಅಮಾನತು: ಶೋಭಾ ಕರಂದ್ಲಾಜೆ ಸ್ಫೋಟಕ ಆರೋಪ – Kannada News | Shobha Karandlaje Alleges Corruption and Cover up in Ballari SP Pavan Nejjurs Suspension

ಬೆಂಗಳೂರು, ಜನವರಿ 04: ಬಳ್ಳಾರಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ಪವನ್ ನೆಜ್ಜೂರ್ ಇದ್ದರು ಎಂಬುದಕ್ಕೆ ಮಾಧ್ಯಮ ವರದಿಗಳು ಪುರಾವೆ ಒದಗಿಸಿವೆ. ಆದರೆ ಅವರ ಮೇಲಿನ ಯಾವ ದ್ವೇಷಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗೊತ್ತಾಗಬೇಕು. ಜಮೀರ್​​ ಖಾನ್​​ ಅವರು ಬಳ್ಳಾರಿ ಎಸ್​​ಪಿಗೆ ಎಷ್ಟು ಬಿಡ್ಡಿಂಗ್​ ಮಾಡಿದ್ದರು ಎಂದು ಪ್ರಶ್ನಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಿಂದ ರಾಜ್ಯದ ಪೊಲೀಸ್ ಅಧಿಕಾರಿಗಳ ನೈತಿಕ ಬಲ ಕುಗ್ಗುತ್ತಿದೆ ಎಂದೂ ಶೋಭಾ ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *