ಪಾಟ್ನಾ, ಮೇ 28: ಉಮಾನಾಥ್ ಗಂಗಾ ಘಾಟ್ ಬಳಿ ಗಂಗಾ ನದಿಯಲ್ಲಿ ದೋಣಿ ಮುಳುಗಿ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ಈಗಾಗಲೇ ಇಬ್ಬರ ಶವ ಸಿಕ್ಕಿದೆ. ದೋಣಿಯಲ್ಲಿ ಸುಮಾರು 14 ರಿಂದ 15 ಜನರಿದ್ದರು.ಸುಮಾರು ಏಳು ಜನರು ಮುಳುಗಿ ಹೋಗಿರುವ ಶಂಕೆ ಇದೆ. ಇತರರನ್ನು ಮತ್ತೊಂದು ದೋಣಿ ಬಳಸಿ ರಕ್ಷಿಸಲಾಗಿದೆ. ಇಲ್ಲಿಯವರೆಗೆ, ಎಷ್ಟು ಜನರು ಮುಳುಗಿದ್ದಾರೆಂದು ದೃಢಪಟ್ಟಿಲ್ಲ. ಬಲವಾದ ಗಾಳಿಯಿಂದಾಗಿ ಸಣ್ಣ ದೋಣಿ ಪಲ್ಟಿಯಾಗಿದೆ.ಎಸ್ಡಿಆರ್ಎಫ್ ತಂಡಗಳು ಸ್ಥಳಕ್ಕೆ ಧಾವಿಸುತ್ತಿದ್ದು, ಶೋಧ ಕಾರ್ಯ ಆರಂಭವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
