ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಗ್ರಹ ಮಂಡಲದ ರಾಜಕುಮಾರ ಹಾಗೂ ಬುದ್ಧಿಕಾರಕ ಎಂದು ಪ್ರಸಿದ್ಧ. ಬುಧನು ಮಂಗಳನ ಅಧಿಪತ್ಯದ ಮೇಷ ರಾಶಿಯಲ್ಲಿದ್ದಾಗ ಚುರುಕುತನ ಮತ್ತು ವೇಗವನ್ನು ಪಡೆಯುತ್ತಾನೆ. ಆದರೆ, ಕೇವಲ ರಾಶಿ ಸ್ಥಿತಿಯಿಂದ ಫಲ ನಿರ್ಣಯ ಮಾಡುವುದು ಅಪೂರ್ಣ. ಮೇಷ ರಾಶಿಯಲ್ಲಿರುವ ಬುಧನು ಈ ಕೆಳಗಿನ ವರ್ಗಗಳಲ್ಲಿ ಸ್ಥಿತನಾದಾಗ ವ್ಯಕ್ತಿತ್ವದ ಮೇಲೆ ವಿಶೇಷ ಪ್ರಭಾವ ಬೀರುತ್ತಾನೆ.
ಬುಧನು ರವಿಯ ಪ್ರಭಾವಕ್ಕೆ ಒಳಗಾಗಿದ್ದು ಮಾತುಗಳಲ್ಲಿ ಅಧಿಕಾರಯುತ ಧೋರಣೆ ಮತ್ತು ಸ್ಪಷ್ಟತೆ ಇರುತ್ತದೆ. ಆಡಳಿತಾತ್ಮಕ ಕೌಶಲಗಳು ವೃದ್ಧಿಯಾಗುತ್ತವೆ. ಇದು ವ್ಯಕ್ತಿಯನ್ನು ತೀಕ್ಷ್ಣಮತಿಯನ್ನಾಗಿ ಮಾಡುವುದಲ್ಲದೆ, ನಾಯಕತ್ವದ ಗುಣಗಳನ್ನು ನೀಡುತ್ತದೆ.
ಚಂದ್ರನ ನವಾಂಶದಲ್ಲಿ ಬುಧನು ಚಂದ್ರನ ಪ್ರಭಾವಕ್ಕೆ ಒಳಗಾದಾಗ ಬುದ್ಧಿಶಕ್ತಿಯೊಂದಿಗೆ ಸೃಜನಶೀಲತೆ ಮತ್ತು ಕಲ್ಪನಾಶಕ್ತಿ ಬೆರೆಯುತ್ತದೆ. ಇದು ಕಲೆ, ಸಾಹಿತ್ಯ ಮತ್ತು ಸಂವಹನ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ವರದಾನವಾಗಲಿದೆ. ಗುರುವಿನ ತ್ರಿಂಶಾಂಶದಲ್ಲಿ ಅತ್ಯಂತ ಸಕಾರಾತ್ಮಕ ಅಂಶ. ಗುರುವಿನ ಪ್ರಭಾವವು ಬುಧನ ಚಂಚಲತೆಯನ್ನು ಕಡಿಮೆ ಮಾಡಿ, ವಿವೇಕ ಮತ್ತು ಧಾರ್ಮಿಕ ಅರಿವನ್ನು ಮೂಡಿಸುತ್ತದೆ. ಇದು ವ್ಯಕ್ತಿಯು ತಪ್ಪು ದಾರಿಗೆ ಹೋಗದಂತೆ ತಡೆದು, ಜ್ಞಾನಾರ್ಜನೆಯಲ್ಲಿ ಆಸಕ್ತಿ ಮೂಡಿಸುತ್ತದೆ.
ರಾಶಿಗಳ ಮೇಲೆ ಸಾಮಾನ್ಯ ಫಲಗಳು:
- ಶುಭ ಫಲ ಪಡೆಯುವ ರಾಶಿಗಳು: ಮಿಥುನ, ಕನ್ಯಾ, ಧನು ಮತ್ತು ಮೀನ ರಾಶಿಯವರಿಗೆ ಇದು ಸುವರ್ಣ ಕಾಲವೆನ್ನಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿ, ಹೊಸ ವ್ಯವಹಾರದ ಆರಂಭ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗುವ ಅವಕಾಶ ಸಿಗುತ್ತದೆ.
- ಮಿಶ್ರ ಫಲ ಪಡೆಯುವ ರಾಶಿಗಳು: ಮೇಷ, ವೃಷಭ, ಸಿಂಹ ಮತ್ತು ತುಲಾ ರಾಶಿಯವರು ಆರ್ಥಿಕವಾಗಿ ಲಾಭ ಪಡೆದರೂ, ಮಾನಸಿಕವಾಗಿ ಸ್ವಲ್ಪ ಒತ್ತಡ ಅನುಭವಿಸಬಹುದು. ಮಾತು ನಿಯಂತ್ರಣದಲ್ಲಿರುವುದು ಅತ್ಯಗತ್ಯ.
- ಅಧಮ ರಾಶಿಗಳು: ಕರ್ಕಾಟಕ, ವೃಶ್ಚಿಕ, ಮಕರ ಮತ್ತು ಕುಂಭ ರಾಶಿಯವರು ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಜಾಗರೂಕರಾಗಿರಬೇಕು. ಕೆಲಸದಲ್ಲಿ ಅಡೆತಡೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಗ್ರಹಗಳ ನಾಯಕ ಸೂರ್ಯ…. ಅವನ ಅನುಗ್ರಹದಿಂದ ಆಗಲಿದೆ ಯಾವೆಲ್ಲ ಕಾರ್ಯ..
ಬುಧ ದಶೆಯಲ್ಲಿ :
ಬುಧ ದಶೆಯು ಒಬ್ಬ ವ್ಯಕ್ತಿಗೆ ಯಾವ ರೀತಿ ಫಲ ನೀಡುತ್ತದೆ ಎಂಬುದು ಅವರ ಜನ್ಮ ಲಗ್ನ ಮತ್ತು ಬುಧನ ಸ್ಥಾನವನ್ನು ಅವಲಂಬಿಸಿರುತ್ತದೆ. ವಿಶೇಷವಾಗಿ ಮಿಥುನ ಮತ್ತು ಕನ್ಯಾ ಲಗ್ನದವರಿಗೆ ಬುಧನು ಲಗ್ನಾಧಿಪತಿಯಾಗಿರುವುದರಿಂದ ಅತ್ಯಂತ ಶುಭ ಫಲ ನೀಡುತ್ತಾನೆ. ಅದರೊಂದಿಗೆ ವೃಷಭ ಮತ್ತು ತುಲಾ ಲಗ್ನದವರಿಗೂ ಬುಧನು ಮಿತ್ರ ಗ್ರಹವಾಗಿರುವುದರಿಂದ ಯಶಸ್ಸು, ಸಂಪತ್ತು ಮತ್ತು ಕೀರ್ತಿಯನ್ನು ತಂದುಕೊಡುತ್ತಾನೆ.
ಮಧ್ಯಮ ಬುಧ ದಶೆ :
ಧನು ಮತ್ತು ಮೀನ ಲಗ್ನದವರಿಗೆ ಬುಧನು ಕೇಂದ್ರ ಸ್ಥಾನಗಳ ಅಧಿಪತಿಯಾಗಿದ್ದರೂ ಸಹ ಕೇಂದ್ರಾಧಿಪತ್ಯ ದೋಷದ ಕಾರಣದಿಂದ ಮಧ್ಯಮ ಫಲಗಳನ್ನು ನೀಡುತ್ತಾನೆ. ಇವರು ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸಬಹುದು. ಮೇಷ ಮತ್ತು ಸಿಂಹ ಲಗ್ನದವರಿಗೂ ಫಲಿತಾಂಶಗಳು ಮಿಶ್ರವಾಗಿರುತ್ತವೆ.
ಅಧಮ ಬುಧ ದಶೆ :
ಕರ್ಕಾಟಕ ಮತ್ತು ವೃಶ್ಚಿಕ ಲಗ್ನದವರಿಗೆ ಬುಧನು ಅಶುಭ ಸ್ಥಾನಗಳ ಆಧಿಪತ್ಯದಿಂದ ದಶೆಯ ಅವಧಿಯಲ್ಲಿ ಅನಗತ್ಯ ಅಲೆದಾಟ, ದೌರ್ಬಲ್ಯ ಅಥವಾ ವಾಗ್ವಾದಗಳು ಉಂಟಾಗಬಹುದು. ಇಂತಹ ಸಮಯದಲ್ಲಿ ವಿಷ್ಣು ಸಹಸ್ರನಾಮದ ಪಠನ ಅವಶ್ಯಕ.
ಒಟ್ಟಾರೆಯಾಗಿ ಹೇಳುವುದಾದರೆ, ಮೇಷ ರಾಶಿಯಲ್ಲಿರುವ ಬುಧನು ಗುರುವಿನ ತ್ರಿಂಶಾಂಶ ಮತ್ತು ಚಂದ್ರನ ನವಾಂಶದಿಂದ ನಕಾರಾತ್ಮಕತೆಗಿಂತ ಸಕಾರಾತ್ಮಕತೆಯೇ ಹೆಚ್ಚಾಗಿರುತ್ತದೆ. ವಿವೇಕಯುತ ಮಾತು ಮತ್ತು ಧರ್ಮಬದ್ಧ ಆಚರಣೆಯು ಈ ದಶೆಯ ಅವಧಿಯಲ್ಲಿ ಹೆಚ್ಚಿನ ಯಶಸ್ಸು.
– ಲೋಹಿತ ಹೆಬ್ಬಾರ್
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 4:13 pm, Thu, 7 May 26
