ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಹಲವೆಡೆ ಭಾರೀ ಅವಾಂತರ: ಲೇಔಟ್ ಒಳಗೆ ನುಗ್ಗಿದ ರಾಜಕಾಲುವೆ ಕೊಳಚೆ ನೀರು – Kannada News | Bengaluru Rain: Over 300 Houses Drowned as Stormwater Drain Overflows into Nagawara Layout; HBR Layout Waterlogged

ಬೆಂಗಳೂರು, ಮೇ 19: ಬೆಂಗಳೂರಿನಲ್ಲಿ ಸಂಜೆ ಸುರಿದ ಭಾರೀ ಮಳೆಗೆ ನಾಗವಾರದ ಎಂಎಸ್ ರಾಮಯ್ಯ ನಾರ್ತ್ ಸಿಟಿ ಲೇಔಟ್‌ನಲ್ಲಿ ಭಾರಿ ಅವಾಂತರ ಸಂಭವಿಸಿದೆ. ರಾಜಕಾಲುವೆಯ ಕೊಳಚೆ ನೀರು ಲೇಔಟ್ ಒಳಗೆ ನುಗ್ಗಿ ಸುಮಾರು 300ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಹತ್ತು ಕ್ರಾಸ್‌ಗಳಲ್ಲಿ ಏಳಕ್ಕೂ ಹೆಚ್ಚು ಕ್ರಾಸ್‌ಗಳು ಸಂಪೂರ್ಣವಾಗಿ ಮುಳುಗಿವೆ. ರಾಜಕಾಲುವೆ ಅಗಲೀಕರಣದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಹಳೆ ಕಾಲುವೆಯನ್ನು ಒಡೆಯಲಾಗಿದ್ದರಿಂದ ನೀರಿನ ಹರಿವು ಹೆಚ್ಚಾಗಿ ಈ ಅವಾಂತರಕ್ಕೆ ಕಾರಣವಾಗಿದೆ.

ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ತೋರಿದ ಆರೋಪ ಕೇಳಿಬಂದಿದೆ. ಮಳೆಗಾಲ ಹತ್ತಿರ ಬಂದಾಗ ಕಾಮಗಾರಿ ಆರಂಭಿಸಿರುವುದು ಮತ್ತು ಅದನ್ನು ಪೂರ್ಣಗೊಳಿಸದಿರುವುದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದಲೇ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ನಿವಾಸಿಗಳು ತಮ್ಮ ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ಪರದಾಡುತ್ತಿದ್ದಾರೆ.

ಮತ್ತೊಂದೆಡೆ, HBR ಲೇಔಟ್​ನಲ್ಲಿ ರಸ್ತೆಗಳು ಜಲಾವೃತಗೊಂದು ಸ್ಥಳೀಯರು ಪರದಾಡುವಂತಾಯಿತು. ಹೊರಮಾವು ಬಳಿಯ SLV ವಜ್ರ ಅಪಾರ್ಟ್ಮೆಂಟ್​ನಲ್ಲೂ ಮಳೆಯಿಂದಾಗಿ ಸಂಕಷ್ಟ ಎದುರಾಯಿತು. ಬೆಲೆಬಾಳುವ ಕಾರುಗಳು ಜಲಾವೃತವಾಗಿದ್ದು, ತುರ್ತು ಸೇವೆ ಇಲ್ಲದೆ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *