ಬೆಂಗಳೂರು, ಏ.29: ರಾಜಧಾನಿಯಲ್ಲಿ ಮುಂದುವರಿದಿರುವ ಧಾರಾಕಾರ ಮಳೆಯು ಮೆಟ್ರೋ ನಿಲ್ದಾಣಗಳನ್ನೂ ಬಿಟ್ಟಿಲ್ಲ. ನಗರದ ಜನನಿಬಿಡ ಬನಶಂಕರಿ ಮೆಟ್ರೋ ನಿಲ್ದಾಣದ ಒಳಭಾಗಕ್ಕೆ ಮಳೆ ನೀರು ನುಗ್ಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದಾದ್ಯಂತ ಗುಡುಗು ಸಹಿತ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಬನಶಂಕರಿ ಮೆಟ್ರೋ ನಿಲ್ದಾಣದ ಒಳಗೆ ನೀರು ಹರಿದು ಬಂದಿದೆ. ನಿಲ್ದಾಣದ ಟಿಕೆಟ್ ಕೌಂಟರ್ ಪ್ರದೇಶ ಸೇರಿದಂತೆ ಪ್ರಯಾಣಿಕರು ಓಡಾಡುವ ಜಾಗಗಳಲ್ಲಿ ಮಳೆ ನೀರು ನಿಂತಿದೆ. ಛಾವಣಿಯಿಂದ ನೀರು ತೊಟ್ಟಿಕ್ಕುತ್ತಿರುವುದರಿಂದ ಮೆಟ್ರೋ ಏರಲು ಬಂದ ಜನರು ಅತ್ತ ಇತ್ತ ಚಲಿಸಲಾಗದೆ ಪರದಾಡುವಂತಾಯಿತು. ಮಳೆ ಹಾನಿಯಿಂದಾಗಿ ಮೆಟ್ರೋ ನಿಲ್ದಾಣದ ಆವರಣದ ಸ್ವಚ್ಛತೆಗೂ ಧಕ್ಕೆಯುಂಟಾಗಿದ್ದು, ಬಿಡುವುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಮೆಟ್ರೋ ಸೇವೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
