ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ಬಿಚ್ಟಿಟ್ಟ ಡಿಹೆಚ್​​ಒ – Kannada News | Bidar and Belagavi Deaths: Alcohol and Heart Attack, Not Heatwave, Confirms DHO

ಬೀದರ್​​/ಬೆಳಗಾವಿ, ಏಪ್ರಿಲ್​​ 22: ಬೀದರ್ ಜಿಲ್ಲೆಯಲ್ಲಿ 20 ವರ್ಷದ ಯುವಕ ಸಮೀರ್‌ನ ಸಾವಿನ ಕುರಿತು ಆರಂಭದಲ್ಲಿ ಬಿಸಿಲಿನ ಧಗೆ ಕಾರಣ ಎಂದು ವರದಿಯಾಗಿತ್ತು. ಅದೇ ರೀತಿ ಬೆಳಗಾವಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ವೆಂಕಟೇಶ್ ಅವರ ಸಾವಿಗೂ ಬಿಸಿಲೇ ಕಾರಣ ಎನ್ನಲಾಗಿತ್ತು. ಆದರೆ, ಈ ಎರಡೂ ಪ್ರಕರಣಗಳ ಬಗ್ಗೆ ಡಿಹೆಚ್‌ಒ ಅವರು ಸ್ಪಷ್ಟನೆ ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಸಮೀರ್ ಬಿಸಿಲಿನಿಂದ ಮೃತಪಟ್ಟಿಲ್ಲ. ಅವರು ಮದ್ಯ ಸೇವಿಸುತ್ತಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನು, ಬೆಳಗಾವಿಯ ವೆಂಕಟೇಶ್ ಅವರು ಕೂಡ ಬಿಸಿಲಿನಿಂದ ನಿಧನರಾಗಿಲ್ಲ. ಅವರಿಗೆ ಹೃದಯಾಘಾತ ಸಂಭವಿಸಿತ್ತು, ಅದರಿಂದಲೇ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *