ಕನ್ನಡದ ‘ದೇವಿ’ ಸಿನಿಮಾದ ವಿಶೇಷ ಹಾಡಿನ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಹಾಸ್ಯ ನಟ ಹುಲಿ ಕಾರ್ತಿಕ್ ತಮ್ಮ ಸೆಟ್ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಾಯಕನ ಸ್ನೇಹಿತನ ಪಾತ್ರ ನಿರ್ವಹಿಸುತ್ತಿರುವ ಹುಲಿ ಕಾರ್ತಿಕ್, ಚಿತ್ರೀಕರಣದ ಸೆಟ್ನಲ್ಲಿರುವ ಸಕಾರಾತ್ಮಕ ವಾತಾವರಣವನ್ನು ಪ್ರಶಂಸಿಸಿದರು.
ನಾಯಕ ನಟ ಚೇತನ್ ಬಗ್ಗೆ ಮಾತನಾಡಿದ ಕಾರ್ತಿಕ್, ‘ಚೇತನ್ ಒಬ್ಬ ದೊಡ್ಡ ಮನುಷ್ಯ. ಅವರು ರೈತರಾಗಿದ್ದರಿಂದ ದೊಡ್ಡ ಮನಸ್ಸು ಹೊಂದಿದ್ದಾರೆ. ರೈತರು ತಾವು ಚೆನ್ನಾಗಿರದಿದ್ದರೂ ತಮ್ಮವರು ಚೆನ್ನಾಗಿರಬೇಕು ಎಂದು ಬಯಸುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಟಿ ಭವ್ಯಾ ಗೌಡ ಅವರನ್ನು ತಂಗಿ ಎಂದು ಕರೆದು ಕಾಲೆಳೆದರು. ಆ ಬಳಿಕ ಮುಂಬೈನಿಂದ ಬಂದ ನಟಿ ಗುಪ್ತಾ ಅವರನ್ನು ಹಾಡಿ ಹೊಗಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
