ಮಂಗಳೂರು, (ಮೇ 14): ಕರ್ನಾಟಕದ (karnataka) ಹಲವೆಡೆ ಮಳೆಯಾಗುತ್ತಿದ್ದು, ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಕೂಲ್ ಮಾಡಿದ್ದಾನೆ. ಅದರಲ್ಲೂ ಬೇಸಿಗೆ ಧಗೆಯಿಂದ ಹೆರಾಣಾಗಿರುವ ಮಂಗಳೂರಿಗರಿಗೆ ಇಂದು (ಮೇ 14) ಮಳೆರಾಯ ತಂಪೆರೆದಿದ್ದಾನೆ. ಇನ್ನೊಂದೆಡೆ ಧಾರಾಕಾರ ಮಳೆಯಿಂದಾಗಿ ಮಂಗಳೂರು ಏರ್ಪೋರ್ಟ್ನಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಹೌದು…ಹವಾಮಾನ ವೈಪರೀತ್ಯದಿಂದ ವಿಮಾನಗಳು ಲ್ಯಾಂಡಿಗ್ ಸಮಸ್ಯೆಯಾಗಿದ್ದು, ಇಳಿಯಲಾಗದೇ ವಿಟ್ಲ ಬಳಿ ಎರಡು ವಿಮಾನಗಳು ಆಕಾಶದಲ್ಲೇ ಸುತ್ತಾಡುತ್ತಿವೆ. ಇದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ.
