ಮಂಗಳೂರಿನಲ್ಲಿ ವರುಣನ ಅಬ್ಬರ: ವಿಮಾನಗಳನ್ನ ಇಳಿಯಲು ಬಿಡದೇ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ

ಮಂಗಳೂರು, (ಮೇ 14): ಕರ್ನಾಟಕದ (karnataka) ಹಲವೆಡೆ ಮಳೆಯಾಗುತ್ತಿದ್ದು, ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ಕೂಲ್ ಮಾಡಿದ್ದಾನೆ. ಅದರಲ್ಲೂ ಬೇಸಿಗೆ ಧಗೆಯಿಂದ ಹೆರಾಣಾಗಿರುವ ಮಂಗಳೂರಿಗರಿಗೆ ಇಂದು (ಮೇ 14) ಮಳೆರಾಯ ತಂಪೆರೆದಿದ್ದಾನೆ. ಇನ್ನೊಂದೆಡೆ ಧಾರಾಕಾರ ಮಳೆಯಿಂದಾಗಿ ಮಂಗಳೂರು ಏರ್​​ಪೋರ್ಟ್​​ನಲ್ಲಿ ವಿಮಾನಗಳ ಲ್ಯಾಂಡಿಂಗ್ ಸಮಸ್ಯೆಯಾಗಿದೆ. ಹೌದು…ಹವಾಮಾನ ವೈಪರೀತ್ಯದಿಂದ ವಿಮಾನಗಳು ಲ್ಯಾಂಡಿಗ್ ಸಮಸ್ಯೆಯಾಗಿದ್ದು, ಇಳಿಯಲಾಗದೇ ವಿಟ್ಲ ಬಳಿ ಎರಡು ವಿಮಾನಗಳು ಆಕಾಶದಲ್ಲೇ ಸುತ್ತಾಡುತ್ತಿವೆ. ಇದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ : ಹವಾಮಾನ ವರದಿ: ವಾರಾಂತ್ಯಕ್ಕೆ ಬೆಂಗಳೂರಲ್ಲಿ ವರುಣನ ಅಬ್ಬರ, ಮೇ 17ರ ವರೆಗೆ ರಾಜ್ಯದ ವಿವಿಧೆಡೆ ಮಳೆ

Source link

Leave a Reply

Your email address will not be published. Required fields are marked *