ಬೆಳಗಾವಿ, ಮೇ 02: ಪುತ್ರಿಯರ ಮದುವೆ ಸಾಲ ತೀರಿಸಲು ಹಿರಿಯ ಅಳಿಯನ ಮನೆಗೆ ಅತ್ತೆ ಕನ್ನಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಳಿಯ ಮತ್ತು ಮಗಳು ಮನೆಯಲ್ಲಿ ಇಲ್ಲದಾಗ ಸಂಬಂಧಿ ಶಿವ ಎಂಬವನ ಜೊತೆ ಸೇರಿಕೊಂಡು ಬೆಳಗಾವಿಯ ಪಿರಣವಾಡಿ ನಿವಾಸಿ ಉಜ್ವಲಾ ಕಮ್ಮಾರ ಎಂಬಾಕೆ ಕಳ್ಳತನ ನಡೆಸಿದ್ದು, ಆರೋಪಿಗಳ ಬಂಧನವಾಗಿದೆ. 16 ಲಕ್ಷ ಮೌಲ್ಯದ 110ಗ್ರಾಂ ಚಿನ್ನದ ಆಭರಣವನ್ನು ಆರೋಪಿಗಳು ಎಗರಿಸಿದ್ದರು. ಚಿನ್ನಾಭರಣ ಕಳ್ಳತನ ಆಗಿರುವ ಬಗ್ಗೆ ಅತ್ತೆಯನ್ನು ಅಳಿಯ ವಿಚಾರಿಸಿದ್ದ . ಆದರೆ ತನಗೆ ಏನೂ ಗೊತ್ತಿಲ್ಲ ಎಂದು ಅಳಿಯನ ಬಳಿ ಅತ್ತೆ ಡ್ರಾಮಾ ಮಾಡಿದ್ದಳು. ಬಳಿಕ ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಗೆ ಅಳಿಯ ದೂರು ನೀಡಿದ್ದು, ಪೊಲೀಸರು ತೀವ್ರ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದಾಗಿ ಅತ್ತೆಯೇ ತಪ್ಪೊಪ್ಪಿಕೊಂಡಿದ್ದಾಳೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
