ಈ ದಿನ ಸೂರ್ಯ ಮತ್ತು ಚಂದ್ರ ಇಬ್ಬರೂ ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದು, ಪರಾಭವನಾಮ ಸಂವತ್ಸರ, ಉತ್ತರಾಯಣ, ಜೇಷ್ಠ ಮಾಸದ ಕೃಷ್ಣಪಕ್ಷ ಚತುರ್ದಶಿ, ಆರ್ದ್ರಾ ನಕ್ಷತ್ರ ಮತ್ತು ಧ್ರುವ ಯೋಗ ಇರುವ ದಿನವಾಗಿದೆ. ರಾಹುಕಾಲವು ಬೆಳಗ್ಗೆ 7:36 ರಿಂದ 9:12 ರವರೆಗೆ ಇದ್ದು, ಸಂಕಲ್ಪ ಕಾಲವು 9:12 ರಿಂದ 10:49 ರವರೆಗೆ ಇರುತ್ತದೆ. ಪ್ರತಿಯೊಂದು ರಾಶಿಯವರ ಆರೋಗ್ಯ, ವೃತ್ತಿಜೀವನ, ಆರ್ಥಿಕ ಪರಿಸ್ಥಿತಿ, ಸಂಬಂಧಗಳು, ಪ್ರೀತಿ-ಪ್ರೇಮ ಮತ್ತು ಕುಟುಂಬ ಜೀವನದ ಮೇಲೆ ಈ ಗ್ರಹಗಳ ಸಂಚಾರದ ಪ್ರಭಾವವನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್’ ದಿನಭವಿಷ್ಯ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಅಲ್ಲದೆ, ಪ್ರತಿಯೊಂದು ರಾಶಿಯವರಿಗೆ ಅದೃಷ್ಟ ಸಂಖ್ಯೆ, ಶುಭ ಬಣ್ಣ, ಪ್ರಯಾಣದ ದಿಕ್ಕು ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾರ್ಗದರ್ಶನ ನೀಡಿದ್ದಾರೆ.
