ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಬೆಲೆ ಭಾರೀ ಏರಿಕೆ: ಈ ತಿಂಗಳೇ ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ! – Kannada News | New Car Prices to Rise From Next Month, Buyers Rush to Book Vehicles This Month

ಬೆಂಗಳೂರು, ಜುಲೈ 24: ಜಿಎಸ್ಟಿ- 2.0 ಜಾರಿಯಾದ ಮೇಲೆ ಹೊಸ ಕಾರುಗಳನ್ನು ಖರೀದಿ ಮಾಡುವವರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಇದೀಗ ಯುದ್ದದ ಎಫೆಕ್ಟ್​ನಿಂದ ಕಚ್ಚಾವಸ್ತುಗಳ ಬೆಲೆ ಏರಿಕೆ (Car Price Hike) ಆಗಿದ್ದು, ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಮೇಲೆ 50 ರಿಂದ 60 ಸಾವಿರ ರೂ.ಯಷ್ಟು ಹೆಚ್ಚಳವಾಗಲಿದ್ದು, ಹೀಗಾಗಿ ಜನರು ಈ ತಿಂಗಳೇ ಕಾರು ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ.

ಯುದ್ಧದ ಎಫೆಕ್ಟ್​: ಕಾರುಗಳ ಬೆಲೆ ಏರಿಕೆ

ಜಿಎಸ್ಟಿ 2-0 ಜಾರಿಯಾದ ಮೇಲೆ ಕಾರುಗಳ ಮೇಲೆ 50 ರಿಂದ 1 ಲಕ್ಷ ರೂ.ವರೆಗೆ, ದ್ವಿಚಕ್ರ ವಾಹನಗಳ ಮೇಲೆ 10 ರಿಂದ 20 ಸಾವಿರ ರೂ.ವರೆಗೆ ಬೆಲೆ ಕಡಿಮೆ ಆಗಿತ್ತು. ಈ ಹಿನ್ನೆಲೆ ಹೊಸ ವಾಹನ ಖರೀದಿ ಮಾಡುವವರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗಿತ್ತು. ಇದೀಗ ಯುದ್ಧದ ಎಫೆಕ್ಟ್​ನಿಂದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಆಗಿರುವ ಹಿನ್ನೆಲೆ, ಹೊಸ ಕಾರುಗಳ ಮೇಲೆ ಎಕ್ಸ್ ಶೋ ರೂಂ ಬೆಲೆ ಮೇಲೆ 45 ರಿಂದ 50 ಸಾವಿರ ರೂ.ವರೆಗೆ ಏರಿಕೆ ಆದರೆ, ಆನ್-ರೋಡ್ ಬೆಲೆ ಮೇಲೆ 15 ರಿಂದ 20 ರೂ.ವರೆಗೆ ಏರಿಕೆ ಆಗುವ ಸಾಧ್ಯತೆ ಇದೆ. ಅಂದರೆ ಹೊಸ ಕಾರು ಕೊಳ್ಳುವವರಿಗೆ 60 ರಿಂದ 70 ಸಾವಿರ ರೂ. ಹೆಚ್ಚಾಗಲಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿವೆ ಬರೋಬ್ಬರಿ 25 ಲಕ್ಷ ಪ್ರೈವೆಟ್ ಕಾರುಗಳು! ದೆಹಲಿ, ಮುಂಬೈಗೇ ಸೆಡ್ಡು ಹೊಡೆದ ಸಿಲಿಕಾನ್ ಸಿಟಿ

ಇನ್ನು ಕಳೆದ ಕೆಲ ತಿಂಗಳಿನಿಂದ ಕಾರುಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲೇ ಇದೆ. ಆಗಸ್ಟ್​ ತಿಂಗಳಿನಿಂದ ಹೊಸ ದರ ಜಾರಿ ಆಗಲಿದೆ. ವಾಹನ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆಯ ಹಾದಿ ಹಿಡಿದಿವೆ. ಪ್ರತಿ ಮಾಡೆಲ್​ಗಳ ಮೇಲೆ 20 ರಿಂದ 50 ಸಾವಿರ ರೂ. ದರ ಏರಿಕೆ ಆಗುವ ಸಾಧ್ಯತೆ ಇದೆ.

ಐಷಾರಾಮಿ ಕಾರುಗಳ ಬೆಲೆ ಏರಿಕೆ ಇಲ್ಲ

ಐಷಾರಾಮಿ ಕಾರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗುತ್ತಿದೆ. ಸಾಮಾನ್ಯ ಜನರು ಖರೀದಿ ಮಾಡುವ ಕಾರುಗಳ ಮೇಲೆ ಮಾತ್ರ ಬೆಲೆ ಏರಿಕೆ ಆಗಲಿದೆ. ಅಂದರೆ 10ರಿಂದ 15 ಲಕ್ಷದೊಳಗಿನ ಕಾರುಗಳ ಬೆಲೆ ಹೆಚ್ಚಳವಾಗಲಿದೆ.

ಗ್ರಾಹಕರು ಹೇಳಿದ್ದಿಷ್ಟು 

ಈ ಬಗ್ಗೆ ಗ್ರಾಹಕರಾದ ವೆಂಕಟ್ ಅವರು ಮಾತನಾಡಿದ್ದು, ‘ಮುಂದಿನ ತಿಂಗಳಿನಿಂದ ಕಾರಿನ ಬೆಲೆ ಏರಿಕೆ ಆಗಲಿರುವ ಹಿನ್ನೆಲೆ, ನಾವು ಈ ತಿಂಗಳೇ ಕಾರು ಬುಕ್ ಮಾಡಿದ್ದೇವೆ. ಇದರಿಂದ ನಮಗೆ ತುಂಬಾ ಹಣ ಉಳಿತಾಯವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಒಂದೇ ವರ್ಷದಲ್ಲಿ 2ನೇ ಬಾರಿ ಏರಿಕೆ, ವಾಹನ ಸವಾರರು ಆಕ್ರೋಶ

ಒಟ್ಟಿನಲ್ಲಿ ಜಿಎಸ್​​ಟಿ ಕಡಿಮೆ ಆದ ಮೇಲೆ ಕಾರುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು, ಆದರೆ ಮುಂದಿನ ತಿಂಗಳಿನಿಂದ ಕಾರುಗಳ ಮೇಲೆ ಬೆಲೆ ಏರಿಕೆ ಆಗ್ತಿರೋದ್ರಿಂದ ಒಂದಷ್ಟು ಗ್ರಾಹಕರಿಗೆ ಹೊರೆ ಆಗುವುದಂತು ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *