
ಬೆಂಗಳೂರು, ಏಪ್ರಿಲ್ 10: ಪ್ರವಾಸಕ್ಕೆಂದು ಪೋಷಕರ ಜೊತೆ ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಗೆ ಬಂದಿದ್ದ ಕೇರಳದ ಬಾಲಕಿ ನಾಪತ್ತೆ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ಚಿಕ್ಕಮಗಳೂರು ಶ್ರೀನಂದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಲಭ್ಯವಿದ್ದರೂ, ಬಾಲಕಿಯನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಒಂದು ಕಡೆ ಆಕೆಯ ಅಪಹರಣದ ಶಂಕೆಯಿದ್ದರೆ, ಮತ್ತೊಂದು ಕಡೆ ಬಾಲಕಿ ಬೇರೆಯವರ ಜೊತೆ ಹೋಗಿರುವ ಸಾಧ್ಯತೆಯೂ ಇದೆ. ಅಂತಿಮ ಸತ್ಯವು ಬಾಲಕಿ ಪತ್ತೆಯಾದ ನಂತರ ತಿಳಿಯುತ್ತದೆ ಎಂದು ಸಚಿವ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ