ದೆಹಲಿ, ಜುಲೈ 05: ಅಯೋಧ್ಯೆ ರಾಮಮಂದಿರದಲ್ಲಿ ಭಕ್ತರು ಅರ್ಪಿಸಿದ್ದ ಕಾಣಿಕೆ, ದೇಣಿಗೆ ಮತ್ತು ಚಿನ್ನಾಭರಣಗಳ ಕಳ್ಳತನ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಎಸ್ಐಟಿ ಆರೋಪಿಗಳ ವಿಚಾರಣೆ ನಡೆಸಿದ್ದು, ಹಲವು ಆಘಾತಕಾರಿ ಸತ್ಯಗಳು ಹೊರಬರುತ್ತಿವೆ. ಕಾಣಿಕೆ ಹಣದಲ್ಲಿ ಹೈಫೈ ಜೀವನ ನಡೆಸ್ತಿದ್ದ ಕಿಂಗ್ಪಿನ್ ಅವಿನಾಶ್ ಶುಕ್ಲಾನಾ ಪ್ರೇಮ ಪುರಾಣವೂ ಬಯಲಾಗಿದೆ. ಮದ್ವೆ ನಿಶ್ಚಿತಾರ್ಥವಾಗಿದ್ದ ಗೆಳತಿಯ ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಹಾಕಿದ್ದ. 2 ಲಕ್ಷ ಹಣ ಕ್ಯಾಶ್ ನೀಡಿದ್ದ. ದುಬಾರಿ ಮೊಬೈಲ್ ಫೋನ್ ಗಿಫ್ಟ್ ಕೊಟ್ಟಿದ್ದ. ತನ್ನ ಸಹೋದರ ಅಭಿಷೇಕ್ ಶುಕ್ಲಾ ಹೆಸ್ರಲ್ಲಿ ಹೊಸ ಬ್ರೆಝಾ ಕಾರನ್ನೂ ಖರೀದಿ ಮಾಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ. ಸಹೋದರ ಅಭಿಷೇಕ್ ಶುಕ್ಲಾ ಹೆಸರಿನಲ್ಲಿ ಹೊಸ ಕಾರನ್ನು ಖರೀದಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಪ್ರಕರಣ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದ್ದು, ಮಾಜಿ ಸಿಎಂ ಉದ್ಧವ್ ಠಾಕ್ರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅರವಿಂದ್ ಕೇಜ್ರಿವಾಲ್ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.