ರೈಲ್ವೆ ನಿಲ್ದಾಣ-ಸಾಂದರ್ಭಿಕ ಚಿತ್ರ Image Credit source: iStock
ನವದೆಹಲಿ, ಫೆಬ್ರವರಿ 20: ಭಾರತೀಯ ರೈಲ್ವೆ(Indian Railways) ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದು. ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ದೇಶದಲ್ಲಿ ಒಂದು ರೈಲ್ವೆ ನಿಲ್ದಾಣವಿದೆ ಅಲ್ಲಿ ರೈಲು ಹಾದುಹೋದ ತಕ್ಷಣ ಇದ್ದಕ್ಕಿದ್ದಂತೆ ಬೋಗಿಗಳಲ್ಲಿ ಕತ್ತಲೆ ಆವರಿಸುತ್ತೆ, ದೀಪಗಳು ತನ್ನಿಂತಾನೆ ಆಫ್ ಆಗುತ್ತದೆ. ಇದು ಭಯಾನಕವೆನಿಸಬಹುದು. ಆದರೆ ಭಯ ಪಡುವ ಅಗತ್ಯವಿಲ್ಲ ಇದಕ್ಕೆ ಇರುವುದು ತಾಂತ್ರಿಕ ಕಾರಣ.
ನಿಲ್ದಾಣ ಎಲ್ಲಿದೆ?
ಈ ವಿಶಿಷ್ಟ ನಿಲ್ದಾಣವು ತಮಿಳುನಾಡಿನ ಚೆನ್ನೈ ಬಳಿ ಇರುವ ತಾಂಬರಂ ರೈಲು ನಿಲ್ದಾಣವಾಗಿದೆ. ಇದು ದಕ್ಷಿಣ ರೈಲ್ವೆ ಭಾಗವಾಗಿದೆ. ಚೆನ್ನೈನ ಸ್ಥಳೀಯ ರೈಲುಗಳಿಗೆ ಪ್ರಮುಖ ಕೇಂದ್ರವಾಗಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ಮುಂಬೈ, ಕೋಲ್ಕತ್ತಾ ಮತ್ತು ದೆಹಲಿಯಂತಹ ಸ್ಥಳಗಳಿಗೆ ರೈಲುಗಳು ಇಲ್ಲಿಂದ ಹೊರಡುತ್ತವೆ. ವಿಶೇಷವೆಂದರೆ ತಾಂಬರಂ ನಿಲ್ದಾಣದ ಬಳಿ ಒಂದು ಸಣ್ಣ ಪ್ರದೇಶವಿದ್ದು, ರೈಲು ಹಾದುಹೋದ ತಕ್ಷಣ ಅಲ್ಲಿ ದೀಪಗಳು ಆರಿ ಹೋಗುತ್ತವೆ. ಈ ವಿದ್ಯಮಾನವು ಸ್ಥಳೀಯ ರೈಲುಗಳಲ್ಲಿ ಮಾತ್ರ ಸಂಭವಿಸುತ್ತದೆ, ಮೇಲ್ ಅಥವಾ ಎಕ್ಸ್ಪ್ರೆಸ್ ರೈಲುಗಳಲ್ಲಿ ಸಂಭವಿಸುವುದಿಲ್ಲ.
ವಿದ್ಯುತ್ ಕಡಿತಗೊಳ್ಳಲು ಕಾರಣವೇನು?
ಮೊದಲ ಬಾರಿ ಪ್ರಯಾಣಿಸುವ ಪ್ರಯಾಣಿಕರು ಭಯಪಡುವುದು ಸಹಜ ಆದರೆ ಅದರ ಅಗತ್ಯವಿಲ್ಲ, ಸ್ಥಳೀಯ ರೈಲುಗಳು ಓವರ್ ಹೆಡ್ ತಂತಿಗಳಿಂದ ವಿದ್ಯುತ್ ಪಡೆಯುತ್ತವೆ. ತಾಂಬರಂ ನಿಲ್ದಾಣದ ಬಳಿ ರೈಲು ಮಾರ್ಗವು ಎರಡು ವಿದ್ಯುತ್ ವಲಯಗಳ ನಡುವೆ ಇರುತ್ತವೆ. ರೈಲು ರೈಲು ಒಂದು ವಲಯದಿಂದ ಮತ್ತೊಂದು ವಲಯಕ್ಕೆ ದಾಟಿದಾಗ ಕೆಲವು ಸೆಕೆಂಡುಗಳ ಕಾಲ ವಿದ್ಯುತ್ ಸರಬರಾಜು ನಿಲ್ಲುತ್ತದೆ. ಇದರಿಂದಾಗಿ ರೈಲಿನ ದೀಪಗಳು ಮತ್ತು ಫ್ಯಾನ್ಗಳು ಸ್ಥಗಿತಗೊಳ್ಳುತ್ತವೆ. ಕೇವಲ 2-3 ಸೆಕೆಂಡುಗಳ ವರೆಗೆ ಇರುತ್ತದೆ. ನಂತರ ಹೊಸ ವಿದ್ಯುತ್ ವಲಯಕ್ಕೆ ಮರಳಿದಾಗ ಎಲ್ಲವೂ ಸರಿಯಾಗುತ್ತದೆ.
ಮತ್ತಷ್ಟು ಓದಿ: ಉಚಿತ ಊಟ ನೀಡುವ ಭಾರತದ ಏಕೈಕ ರೈಲು ಎಲ್ಲಿದೆ ಗೊತ್ತಾ?
ಮೊದಲು ಪ್ರಯಾಣಿಕರು ಈ ಕತ್ತಲಿನಿಂದ . ರೈಲ್ವೆ ಈ ಬಗ್ಗೆ ಜಾಗೃತಿ ಮೂಡಿಸಿದ್ದು, ಇದು ಸಾಮಾನ್ಯ ಎಂದು ವಿವರಿಸುವ ಸೂಚನಾ ಫಲಕಗಳನ್ನು ನಿಲ್ದಾಣಗಳಲ್ಲಿ ಅಳವಡಿಸಿದೆ. ಹೊಸ ತಂತ್ರಜ್ಞಾನದೊಂದಿಗೆ ಭವಿಷ್ಯದಲ್ಲಿ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಚೆನ್ನೈ ಮೆಟ್ರೋ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
