ರಾಜೇಸಾಬ್ ವಾಲಿಕಾರ್Image Credit source: tv9 kannada
ಯಾದಗಿರಿ, ಜೂನ್ 22: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ (Custodial death) ನಡೆದಿದೆ ಎನ್ನಲಾಗುತ್ತಿದೆ. ವಿಚಾರಣೆಗೆ ಕರೆದು ಪೊಲೀಸರ (police) ಹಲ್ಲೆಯಿಂದ ವೃದ್ಧ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. 70 ವರ್ಷದ ರಾಜೇಸಾಬ್ ವಾಲಿಕಾರ್ ಮೃತ ವೃದ್ಧ. ಸದ್ಯ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಎಎಸ್ಐ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಮುಖ್ಯಾಂಶಗಳು
- ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್?
- ವಿಚಾರಣೆಗೆ ಕರೆದು ವೃದ್ಧನ ಮೇಲೆ ಪೊಲೀಸರಿಂದ ಹಲ್ಲೆ
- ASI ವಿರುದ್ಧ ಮೃತ ಕುಟುಂಬಸ್ಥರು ಆರೋಪ
ನಡೆದಿದ್ದೇನು?
ರಾಜೇಸಾಬ್ ಹುಣಸಗಿ ತಾಲೂಕಿನ ಕರಿಕಲ್ ಗ್ರಾಮದ ವ್ಯಕ್ತಿ. ಜಮೀನು ವ್ಯಾಜ್ಯ ಸಂಬಂಧ ದೂರು ಬಂದಿದ್ದಕ್ಕೆ ಪೊಲೀಸರು ರಾಜೇಸಾಬ್ರನ್ನು ಠಾಣೆಗೆ ಕರೆದಿದ್ದರು. ವಿಚಾರಣೆ ವೇಳೆಯೇ ಎಎಸ್ಐ ಸಂಗಪ್ಪ ಹೊಡೆದಿದ್ದಕ್ಕೆ ವೃದ್ಧ ಕುಸಿದು ಬಿದ್ದಿದ್ದಾರೆ. ಪೊಲೀಸರೇ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಸದ್ಯ ಎಎಸ್ಐ ವಿರುದ್ಧ ಕ್ರಮಕ್ಕೆ ಕುಟುಂಬದವರು ಒತ್ತಾಯಿಸಿದ್ದಾರೆ.
ವಕೀಲನಿಗೆ ಕಪಾಳಮೋಕ್ಷ, ಅವಾಚ್ಯ ಶಬ್ದಗಳಿಂದ ನಿಂದನೆ: ಲೇಡಿ ಇನ್ಸ್ಪೆಕ್ಟರ್ ವಿರುದ್ಧ ಆರೋಪ
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ತುರುವಿಹಾಳ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಜಾತಾ ವಿರುದ್ಧ ವಕೀಲನಿಗೆ ಕಪಾಳಮೋಕ್ಷ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿಬಂದಿದೆ. ತುರುವಿಹಾಳ ಠಾಣೆಯ ಆವರಣದಲ್ಲಿ ವಕೀಲ ಹರಳಯ್ಯಗೆ ಕಪಾಳಮೋಕ್ಷ ಮಾಡಲಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕಿರುಕುಳ ಆರೋಪ: ನಾಡಿದ್ದು ಹಸೆಮಣೆ ಏರಬೇಕಿದ್ದ ಯುವತಿ ಸೇರಿ ಹೆತ್ತವರ ದಾರುಣ ಅಂತ್ಯ
ವಕೀಲ ಹರಳಯ್ಯ ಸಹೋದರ ಸೋಮನಾಥ ರೌಡಿಶೀಟರ್ ಆಗಿದ್ದು, ಈ ಹಿನ್ನೆಲೆ ಇಂದು ಬೆಳಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪಿಎಸ್ಐ ಪರಿಶೀಲಿಸಿದ್ದಾರೆ. ಪರಿಶೀಲನೆ ಬಳಿಕ ಸೋಮನಾಥನ ಸಹಿ ಪಡೆದು ವಾಪಸಾಗಿದ್ದರು. ನೋಟಿಸ್ ಪ್ರತಿ, ಸಹಿ ಪಡೆದ ಪ್ರತಿಯನ್ನ ವಕೀಲ ಹರಿದುಹಾಕಿದ್ದು, ಈ ವೇಳೆ ಪಿಎಸ್ಐ ಸುಜಾತಾ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಕೇಳಿಬಂದಿದೆ. ಖಾಲಿ ಹಾಳೆಯಲ್ಲಿ ಸಹಿ ಪಡೆದಿರೋದಾಗಿ ವಕೀಲ ಹರಳಯ್ಯ ಆರೋಪಿಸಿದ್ದಾರೆ. ಈ ಹಿನ್ನೆಲೆ ಇಂದು ಸಿಂಧನೂರು ತಾಲೂಕು ವಕೀಲರ ಸಂಘದಿಂದ ಕೋರ್ಟ್ ಕಲಾಪ ಬಹಿಷ್ಕರಿಸಲಾಯಿತು. ಬಳಿಕ ಸಿಂಧನೂರು ಉಪ ವಿಭಾಗ ಡಿವೈಎಸ್ಪಿ ಚಂದ್ರಶೇಖರ್ಗೆ ವಕೀಲ ಹರಳಯ್ಯ ದೂರು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
