Headlines

ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ? – Kannada News | Tamil Nadu CM Vijay’s Oath: Vande Mataram, Jan Gana Mana, Tamil Thai Vazhthu Protocol Explained

ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ…Image Credit source: PTI

ಚೆನ್ನೈ, ಮೇ 10: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ವಿಜಯ್ (Thalapathi Joseph Vijay) ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನಲ್ಲಿರುವ ರಾಜಭವನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ವಿಜಯ್​ಗೆ ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಡಾಗಿರುವ ವಂದೇ ಮಾತರಂ (National song Vande Mataram) ಅನ್ನು ಹಾಡಿಸಲಾಯಿತು. ನಂತರ ರಾಷ್ಟ್ರಗೀತೆ (National Anthem) ಹಾಗೂ ಆ ಬಳಿಕ ತಮಿಳುನಾಡಿನ ನಾಡಗೀತೆಯನ್ನು ಹಾಡಲಾಯಿತು.

ಬಂಗಾಳಿ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಲಾಯಿತು. ನಂತರ, ರವೀಂದ್ರನಾಥ್ ಠಾಗೋರ್ ವಿರಚಿತ ಜನ ಗಣ ಮನ ರಾಷ್ಟ್ರ ಗೀತೆಯನ್ನು ಹಾಡಲಾಯಿತು. ಮೂರನೇ ಕ್ರಮಾಂಕದಲ್ಲಿ ತಮಿಳ್ ತಾಯ್ ವಾಳ್ತು ಹಾಡನ್ನು ಹಾಡಿಸಲಾಯಿತು.

ತಮಿಳ್ ತಾಯ್ ವಾಳ್ತು ಹಾಡನ್ನು 19ನೇ ಶತಮಾನದ ತಮಿಳು ಕವಿ ಮನೋನ್ಮಣಿಯಮ್ ಸುಂದಂ ಪಿಳ್ಳೈ ಅವರು ಬರೆದಿದ್ದಾರೆ. ತಮಿಳು ದೈವಕ್ಕೆ ಪ್ರಾರ್ಥನೆ ಸಲ್ಲಿಸುವ ಹಾಡು ಇದು. 1970ರಲ್ಲಿ ಈ ಹಾಡನ್ನು ತಮಿಳುನಾಡು ಸರ್ಕಾರ ಅಧಿಕೃತ ಪ್ರಾರ್ಥನೆ ಎನ್ನುವ ಸ್ಥಾನ ಕೊಟ್ಟಿತು. 2021ರಲ್ಲಿ ಇದು ತಮಿಳುನಾಡಿನ ನಾಡಗೀತೆಯಾಯಿತು.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

1970ರಿಂದಲೂ ತಮಿಳುನಾಡಿನಲ್ಲಿ ಪ್ರಮಾಣ ವಚನ ಬೋಧನೆಯಂತಹ ಕಾರ್ಯಕ್ರಮಗಳಲ್ಲಿ ತಮಿಳ್ ತಾಯ್ ವಾಳ್ತುವನ್ನು ಮೊದಲು ಹಾಡಲಾಗುತ್ತದೆ. ನಂತರ ಜನ ಗಣ ಮನ ಹಾಡಿಸಲಾಗುತ್ತಾ ಬಂದಿದೆ. ಮಧ್ಯದಲ್ಲಿ ಒಮ್ಮೆ ಜಯಲಲಿತಾ ಅವರ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲಾಗಿತ್ತು. ಉಳಿದಂತೆ, ತಮಿಳು ನಾಡಗೀತೆ ಮೊದಲು, ನಂತರ ರಾಷ್ಟ್ರ ಗೀತೆ. ಈ ಪರಿಪಾಟವೇ ಇದ್ದದ್ದು.

ಜೋಸೆಫ್ ವಿಜಯ್ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆಗೆ 3ನೇ ಸ್ಥಾನ ಯಾಕೆ?

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕ್ರಮವಾಗಿ ವಂದೇ ಮಾತರಂ, ಜನಗಣಮನ ಹಾಗೂ ತಮಿಳು ತಾಯ್ ವಾಳ್ತು ಹಾಡಲಾಯಿತು. ಮೊದಲು ಇರುತ್ತಿದ್ದ ತಮಿಳು ನಾಡಗೀತೆ ಮೂರನೇ ಕ್ರಮಾಂಕಕ್ಕೆ ಹೋಗಿರುವುದು ಕೆಲವರಿಗೆ ಅಚ್ಚರಿ ಎನಿಸಬಹುದು. ಅದಕ್ಕೆ ಕಾರಣಗಳಿವೆ.

2026ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುಗಳಿಗೆ ಒಂದು ನಿಯಮಾವಳಿ ಮತ್ತು ಕ್ರಮಗಳನ್ನು ನಿಗದಿ ಮಾಡಿದೆ. ಅದರ ಪ್ರಕಾರ ಮೊದಲು ವಂದೇ ಮಾತರಂ ಹಾಡಬೇಕು. ನಂತರ ಜನ ಗಣ ಮನ ಇರಬೇಕು.

ಇದನ್ನೂ ಓದಿ: ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?

ಈ ಪ್ರೋಟೋಕಾಲ್ ಅನ್ನು ವಿಜಯ್ ಕಾರ್ಯಕ್ರಮದಲ್ಲಿ ನೆರವೇರಿಸಲಾಗಿದೆ. ಇದು ವಿಜಯ್ ಅವರ ರಾಜಕೀಯ ನಿಲುವಿನಲ್ಲಾದ ಬದಲಾವಣೆ ಎಂದಾಗಲೀ, ದ್ರಾವಿಡ ಸಿದ್ಧಾಂತಗಳಿಂದ ದೂರ ಹೋಗಿದ್ದಾರೆಂದಾಲೀ ಅರ್ಥೈಸಲು ಆಗುವುದಿಲ್ಲ. ಪಶ್ಚಿಮ ಬಂಗಾಳ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ರಾಷ್ಟ್ರೀಯ ಹಾಡು, ರಾಷ್ಟ್ರ ಗೀತೆ ಹಾಗೂ ಬಂಗಾಳಿ ನಾಡಗೀತೆಯನ್ನು ಅನುಕ್ರಮವಾಗಿ ಹಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *